ಕಲಘಟಗಿ: ಧಾರವಾಡ ಕ್ರಾಸ್ ಹತ್ತಿರವಿರುವ ಆದ್ಯಾ ಹೋಟೆಲ್ನಲ್ಲಿ ಯಲ್ಲಾಪುರ ತಾಲ್ಲೂಕಿನ ಮದನೂರ ಹಾಗೂ ಕಿರವತ್ತಿ ಗ್ರಾಮ ಪಂಚಾಯತಿ ಸದಸ್ಯರ ನಡುವೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಕುರಿತು ಮಾರಾಮರಿ ನಡೆದಿದೆ.
ಯಲ್ಲಾಪುರ ತಾಲ್ಲೂಕಿನ ಮದನೂರಿನ ವಿಠ್ಠು ಹಾಗೂ ಜೋಗಿಕೊಪ್ಪ ಗ್ರಾಮದ ಲಕ್ಕು ಗಾವಡೆ ಎಂಬುವರನ್ನು ಮಚ್ಚು, ಲಾಂಗ್ನಿಂದ ಥಳಿಸಲಾಗಿದೆ. ಗಾಯಾಳುಗಳು ಕಲಘಟಗಿ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿತರಾದ ಯಲ್ಲಾಪುರ ತಾಲ್ಲೂಕಿನ ಕಿರವತ್ತಿಯ ವಿಜಯ ಮಿರಾಶಿ, ರಾಘವೇಂದ್ರ ಗೊಂದಿ, ಸಂಜಯ ಮಿರಾಶಿ, ಪ್ರಕಾಶ ಮಿರಾಶಿ, ಪರಶುರಾಮ ಚಲವಾದಿ, ಆನಂದ ಕುರಿ, ವಿನಾಯಕ ತಣೇಕರ ಹಾಗೂ ಇತರೆ 60 ಜನರ ಸೇರಿ ವಿಠ್ಠು ಹಾಗೂ ಲಕ್ಕು ಗಾವಡೆ ಮೇಲೆ ಹಲ್ಲೆಮಾಡಿದವರು ಎನ್ನಲಾಗಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಪ್ರಭು ಸೂರಿನ್ ತನಿಖೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.