ADVERTISEMENT

Video | ಸಿದ್ಧಾರೂಢರ ಅಂಗಾರ ದೇಶಕ್ಕೆಲ್ಲ ಬಂಗಾರ: ಹುಬ್ಬಳ್ಳಿಯಲ್ಲಿ ಅಜ್ಜನ ರಥೋತ್ಸವ ಸಡಗರ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 15:56 IST
Last Updated 19 ಫೆಬ್ರುವರಿ 2023, 15:56 IST

ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿ ಅವರು ಉತ್ತರ ಕರ್ನಾಟಕದ ಆರಾಧ್ಯ ದೈವ. ಸರ್ವಧರ್ಮಿಯ ಭಕ್ತರನ್ನು ಹೊಂದಿರುವ ಸಿದ್ಧಾರೂಢ ಮಠ ಜಾತ್ಯತೀತ ಮಠವೆಂದೇ ಪ್ರಸಿದ್ಧಿ. ಸ್ಥಳೀಯರು, ಅಕ್ಕಪಕ್ಕದ ಜಿಲ್ಲೆಯವರಷ್ಟೇ ಅಲ್ಲದೆ, ಹೊರ ರಾಜ್ಯಗಳಿಂದಲೂ ಮಠಕ್ಕೆ ಹೆಚ್ಚಿನ ಭಕ್ತರಿದ್ದಾರೆ. ಶಿವಾರಾಧನೆಯ ಹಬ್ಬವಾದ ಮಹಾ ಶಿವರಾತ್ರಿಯ ಮಾರನೇ ದಿನ, ಅಂದರೆ ಭಾನುವಾರ ಸ್ವಾಮೀಜಿಯ ಜಾತ್ರಾ ಮಹೋತ್ಸವದ ರಥೋತ್ಸವ ಅದ್ಧೂರಿಯಾಗಿ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.