ಹುಬ್ಬಳ್ಳಿ: ಅಗಲಿದ ಸಂಘದ ಹಿರಿಯರಿಗೆರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘದ ವತಿಯಿಂದ ಭಾನುವಾರ ನುಡಿನಮನ ಸಲ್ಲಿಸಲಾಯಿತು.
ನಗರದವೀರ ಗಂಗಾಧರ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ‘ಕೋವಿಡ್ ಸೋಂಕು ತಗುಲಿದಾಗ ಎದೆಗುಂದದೇ ಅಮೂಲ್ಯ ಜೀವ ಉಳಿಸಿಕೊಳ್ಳಬೇಕು. ಲಾಕ್ಡೌನ್ನಿಂದಾಗಿದುಡಿಯುವ ಕೈಗಳಿಗೆ ಕೆಲಸವಿಲ್ಲದ ಕಾರ್ಮಿಕರಿಗೆ ಸಂಘ, ಸಂಸ್ಥೆಗಳು ಸಹಾಯಹಸ್ತ ನೀಡಬೇಕು’ ಎಂದು ಹೇಳಿದರು. ಬಳಿಕಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.
ಸಂಘದ ಸದಸ್ಯರಾಗಿದ್ದ ದಿವಂಗತ ಬಿ.ಎಸ್. ಪಾಟೀಲ, ಕಾಡಯ್ಯ ಹಿರೇಮಠ, ಎಸ್. ಸಿ. ಕುಂದಗೋಳಮಠ ಮತ್ತು ರವೀಂದ್ರ ವಸ್ತ್ರದ ಅವರಿಗೆ ನುಡಿನಮನ ಸಲ್ಲಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷ ಆರ್.ಎಂ.ಹಿರೇಮಠ,ಗದಗಯ್ಯ ಹಿರೇಮಠ, ಸಂಘದ ಉಪಾಧ್ಯಕ್ಷ ವಿ.ವಿ. ಕುರ್ತಕೊಟಿ, ಸದಸ್ಯರಾದ ಮಹಾದೇವಪ್ಪ ಕುಮಶಿ, ವಿ. ಜಿ. ಪಾಟೀಲ, ಡಾ ಎಸ್. ವಿ. ಹಿರೇಮಠ, ಎಸ್. ಸಿ. ಕಮ್ಮಾರ್, ವಿ.ಎಸ್. ಸೊಪಿಮಠ ಇದ್ದರು.ಜಾನಪದ ಕಲಾವಿದ ಡಾ. ರಾಮು ಮೂಲಗಿ ಜಾನಪದ ಗೀತೆ ಹಾಡಿದರು. ಕಾರ್ಯದರ್ಶಿ ಸಿ.ಆರ್. ಉಕ್ಕಲಿ ವಂದನಾರ್ಪಣೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.