ADVERTISEMENT

ಗಂಧದ ಮರಕ್ಕೆ ಕಳ್ಳರಿಂದ ಕೊಡಲಿ ಪೆಟ್ಟು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 4:55 IST
Last Updated 8 ನವೆಂಬರ್ 2022, 4:55 IST
ಚಿತ್ರಾವಳಿ: ಉಪ್ಪಿನಬೆಟಗೇರಿ ಗ್ರಾಮದ ಮಾರ್ಕೇಟ ರಸ್ತೆಯ ಮನೆಯ ಹಿತ್ತಲಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ತುಂಡರಿಸಿರುವದು
ಚಿತ್ರಾವಳಿ: ಉಪ್ಪಿನಬೆಟಗೇರಿ ಗ್ರಾಮದ ಮಾರ್ಕೇಟ ರಸ್ತೆಯ ಮನೆಯ ಹಿತ್ತಲಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ತುಂಡರಿಸಿರುವದು   

ಉಪ್ಪಿನಬೆಟಗೇರಿ: ಗ್ರಾಮದ ಮಾರ್ಕೇಟ್‌ ರಸ್ತೆಯ ಕರಬಸಪ್ಪ ಓಂಕಾರಿ ಎಂಬುವವರ ಮನೆಯ ಹಿತ್ತಲಲ್ಲಿ ಬೆಳೆದಿದ್ದ ಶ್ರೀಗಂಧದ ಗಿಡವನ್ನು ಕತ್ತರಿಸಿದ ಕಳ್ಳರು, ಅದನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.

ಸೋಮವಾರ ಬೆಳಗಿನ ಜಾವ ಈ ಕಳವು ನಡೆದಿದೆ. ಗಿಡವನ್ನು ಯಾಂತ್ರಿಕ ಗರಗಸದಿಂದ ಕತ್ತರಿಸಿ, ತುಂಡರಿಸಿಕೊಂಡು ಹೋಗಿದ್ದಾರೆ. ಬೈಕ್‌ ಮೇಲೆ ಬಂದಿದ್ದ ಇಬ್ಬರು ಮರವನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ.

ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.