ADVERTISEMENT

Asia Cup 2022: ಪಾಕಿಸ್ತಾನ ವಿರುದ್ಧ ಭಾರತದ ಗೆಲುವಿಗೆ ದರ್ಗಾದಲ್ಲಿ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 8:19 IST
Last Updated 28 ಆಗಸ್ಟ್ 2022, 8:19 IST
   

ಹುಬ್ಬಳ್ಳಿ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಭಾರತದ ಗೆಲುವಿಗಾಗಿ ನಗರದ ಹಳೇ ಹುಬ್ಬಳ್ಳಿಯಲ್ಲಿರುವ ಸೈಯ್ಯದ್ ಫತೇಶಾವಲಿ ದರ್ಗಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕ್ರಿಕೆಟ್ ಅಭಿಮಾನಿಗಳು ಭಾನುವಾರ ರಾಷ್ಟ್ರಧ್ವಜ ಹಿಡಿದು ಪ್ರಾರ್ಥನೆ ಸಲ್ಲಿಸಿದರು.

ಚಾದರ್ ಹಾಗೂ ಹೂವು ಅರ್ಪಿಸಿದ ಅಭಿಮಾನಿಗಳು, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಲಿ.‌ ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತದ ಗೆಲುವಿನ ಯಾತ್ರೆ ಮುಂದುವರಿಯಲಿ ಎಂದು ಪ್ರಾರ್ಥಿಸಿದರು.

ಷಾಜಮಾನ ಮುಜಾಹಿದ, ರಜತ ಉಳ್ಳಾಗಡ್ಡಿಮಠ, ಇನಾಯತಖಾನ ಪಠಾಣ, ವಾಸೀಂ ಅಣ್ಣಿಗೇರಿ, ಇರ್ಫಾನ ಪಠಾಣ, ಮುಜಾಫರ ಬಹಾದ್ಧೂರ, ನದೀಮ ಮುಲ್ಲಾ, ನಿಯಾಜ ಕರಡಿಗುಡ್ಡ, ಅನೀಸ ಅಹ್ಮದ ಅಲ್ವೂರ, ನಿಯಾಜ ಬೇಪಾರಿ, ಅವೀಜ ಟಿನವಾಲೆ ಹಾಗೂ ಜಾವೀದ ಬೇಪಾರಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.