
ಗಜೇಂದ್ರಗಡ: ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಪುಣ್ಯತಿಥಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಬಿಜೆಪಿ ರೋಣ ಮಂಡಲದ ಅಧ್ಯಕ್ಷ ಉಮೇಶ ಮಲ್ಲಾಪುರ ಮಾತನಾಡಿ, ‘ಬಿಜೆಪಿ ದೇಶದಲ್ಲಿಂದು ಇಷ್ಟು ಉನ್ನತ ಸ್ಥಾನದಲ್ಲಿರುವುದಕ್ಕೆ ಹಲವರ ಕೊಡುಗೆಗಳಿವೆ. ಅದರಲ್ಲಿ ಬಹುಮುಖ ಪ್ರತಿಭೆ ಹಾಗೂ ಸಂಘಟನಾ ಚತುರ ಉಪಾಧ್ಯಾಯರು ಪ್ರಮುಖರು’ ಎಂದರು.
ಗಜೇಂದ್ರಗಡ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ ಮಾತನಾಡಿದರು. ಪುರಸಭೆ ಸದಸ್ಯರಾದ ಕನಕಪ್ಪ ಅರಳಿಗಿಡದ, ಯಮನೂರಪ್ಪ ತಿರಕೋಜಿ, ಮೂಖಪ್ಪ ನಿಡಗುಂದಿ, ರೂಪಲೇಶ ರಾಠೋಡ, ಯು.ಆರ್. ಚನ್ನಮ್ಮನವರ, ವೀರಪ್ಪ ಪಟ್ಟಣಶಟ್ಟಿ, ಮುಖಂಡರಾದ ಉಮೇಶ ಚನ್ನು ಪಾಟೀಲ, ಅಂದಪ್ಪ ಅಂಗಡಿ, ಮಲ್ಲು ಕುರಿ, ಸಂಗಮೇಶ ಸೊಬಗಿನ, ರವಿ ಶಿಂಗ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.