ADVERTISEMENT

14 ಅಡಿಯ ಕಾಳಿಂಗ ಸರ್ಪ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 10:15 IST
Last Updated 12 ಡಿಸೆಂಬರ್ 2020, 10:15 IST
ಹೆತ್ತೂರು ಹೋಬಳಿಯ ಯರಗಳ್ಳಿ ಗ್ರಾಮದ ಮನೆಯ ಛಾವಣಿಯಲ್ಲಿದ್ದ 14 ಅಡಿ ಉದ್ದ, 12 ಕೆ.ಜಿ ತೂಕದ ಕಾಳಿಂಗ ಸರ್ಪವನ್ನು ಸಕಲೇಶಪುರದ ಉರಗ ಪ್ರೇಮಿ ಮಹಮ್ಮದ್ ಪರಾನ್‌ ಹಿಡಿದರು
ಹೆತ್ತೂರು ಹೋಬಳಿಯ ಯರಗಳ್ಳಿ ಗ್ರಾಮದ ಮನೆಯ ಛಾವಣಿಯಲ್ಲಿದ್ದ 14 ಅಡಿ ಉದ್ದ, 12 ಕೆ.ಜಿ ತೂಕದ ಕಾಳಿಂಗ ಸರ್ಪವನ್ನು ಸಕಲೇಶಪುರದ ಉರಗ ಪ್ರೇಮಿ ಮಹಮ್ಮದ್ ಪರಾನ್‌ ಹಿಡಿದರು   

ಹೆತ್ತೂರು: ಹೋಬಳಿಯ ಯರಗಳ್ಳಿ ಗ್ರಾಮದಲ್ಲಿ ಭಾರಿ ಗಾತ್ರದ 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಲಾಯಿತು.

ಗ್ರಾಮದ ದೇವರಾಜ ಅವರು ತಮ್ಮ ಏಲಕ್ಕಿ ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರಿಗುವಾಗ ತಮ್ಮ ಹಂಚಿನ ಮನೆಯ ಚಾವಣಿಯಲ್ಲಿ ಹಾವು ಕಾಣಿಸಿಕೊಂಡಿದೆ. ಆಗ ಜನ ಸೇರಿದರು. ದೊಡ್ಡ ಹಾವು ನೋಡಿದ ಜನ ಆತಂಕಗೊಂಡಿದ್ದರು.

ಆಗ ಕೆಲವರು ಸಕಲೇಶಪುರದ ಉರಗ ಪ್ರೇಮಿ ಮಹಮ್ಮದ್ ಪರಾನ್‌ಗೆ ಪೋನ್ ಮಾಡಿ ಕರೆಯಿಸಿದರು. ಸುಮಾರು 4 ಘಂಟೆಗೂ ಹೆಚ್ಚು ಹೊತ್ತು ಕಾರ್ಯಾಚರಣೆ ನಡೆಸಿ ಸುಮಾರು 14 ಅಡಿ ಉದ್ದ ಹಾಗೂ 12 ಕೆ.ಜಿ ತೂಕವಿದ್ದ ಕಾಳಿಂಗ ಸರ್ಪವನ್ನು ಹಿಡಿದು ಬಿಸಲೆ ರಕ್ಷಿತಾರಣ್ಯಕ್ಕೆ ಬಿಡಲಾಯಿತು.

ADVERTISEMENT

ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ನರಸಿಂಹಮೂರ್ತಿ, ವಿಜಯಕುಮಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.