ADVERTISEMENT

ವಲಯ ಮಟ್ಟದ ಸಾಧನಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 5:14 IST
Last Updated 31 ಜನವರಿ 2026, 5:14 IST
ಹಾಸನ ತಾಲ್ಲೂಕಿನ ಸತ್ಯಮಂಗಲ ವಲಯ ಮಟ್ಟದ ಸಾಧನಾ ಸಮಾವೇಶವನ್ನು ಡಿವೈಎಸ್ಪಿ ಗಂಗಾಧರ್‌ ಉದ್ಘಾಟಿಸಿದರು 
ಹಾಸನ ತಾಲ್ಲೂಕಿನ ಸತ್ಯಮಂಗಲ ವಲಯ ಮಟ್ಟದ ಸಾಧನಾ ಸಮಾವೇಶವನ್ನು ಡಿವೈಎಸ್ಪಿ ಗಂಗಾಧರ್‌ ಉದ್ಘಾಟಿಸಿದರು    

ಹಾಸನ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಶಾಂತಿಗ್ರಾಮ ಹೋಬಳಿಯ ಸತ್ಯಮಂಗಲ ವಲಯ ಮಟ್ಟದ ಸಾಧನಾ ಸಮಾವೇಶವನ್ನು ಡಿವೈಎಸ್ಪಿ ಗಂಗಾಧರಪ್ಪ ಉದ್ಘಾಟಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿರುವ ಸಮಾಜಮುಖಿ ಕೆಲಸಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮಹಿಳೆಯರು ಉಳಿತಾಯ ಮನೋಭಾವ ಬೆಳೆಸುವ ಬಗ್ಗೆ ಹಾಗೂ ಪೋಕ್ಸೊ ಕಾಯ್ದೆಯ ನಿಯಮಗಳ ಬಗ್ಗೆ ತಿಳಿಸಿ, ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರದ ಕುರಿತು ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್‌ ಎಚ್.ಎಲ್‌. ಮಲ್ಲೇಶ್ ಗೌಡ ಮಾತನಾಡಿ, ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ನೀಡುವುದು ಹಾಗೂ ಆಧುನಿಕ ಯುಗದಲ್ಲಿ ಮಕ್ಕಳಿಗೆ ನೈತಿಕತೆಯನ್ನು ಬೆಳೆಸುವುದರ ಬಗ್ಗೆ ತಿಳಿಸಿದರು.

ADVERTISEMENT

ಸುರೇಶ ಗುರೂಜಿ ಮಾತನಾಡಿ, ಮಾನಸಿಕ ಒತ್ತಡ ನಿರ್ವಹಣೆ ಯೋಗ ಬಹಳ ಮುಖ್ಯ. ಧ್ಯಾನ, ನಿಯಮಿತ ವ್ಯಾಯಾಮ ಮಾಡುವುದು, ಸಾಕಷ್ಟು ನಿದ್ದೆ ಮಾಡುವುದು, ಸ್ನೇಹಿತರೊಂದಿಗೆ ಮಾತನಾಡುವುದು, ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಅಗತ್ಯ. ಶಿಕ್ಷಣವು ನಮ್ಮ ಜೀವನದಲ್ಲಿ ಬಹಳ ಮುಖ್ಯ. ಅದರಿಂದ ಜ್ಞಾನ, ಕೌಶಲ ಮತ್ತು ಮೌಲ್ಯಗಳನ್ನು ಪಡೆಯಲು ಸಹಾಯಕ. ಸ್ವಾವಲಂಬನೆ ಮತ್ತು ಸ್ವಾತಂತ್ರ್ಯವನ್ನು ನೀಡುತ್ತದೆ ಎಂದು ಹೇಳಿದರು.

ಯೋಜನೆಯ ತಾಲ್ಲೂಕಿನ ಯೋಜನಾಧಿಕಾರಿಗಳು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ರಮೇಶ್, ಒಕ್ಕೂಟದ ಅಧ್ಯಕ್ಷೆ ರಾಣಿ, ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.