ಅರಸೀಕೆರೆ: 80 ಅಡಿ ಆಳದ ಬಾವಿಗೆ ಆಕಸ್ಮಿಕವಾಗಿ ಬಿದ್ದು, ರಾತ್ರಿಯಿಡೀಅಲ್ಲೇ ನರಳಾಡಿದ ವ್ಯಕ್ತಿಯೊಬ್ಬರು ಬದುಕುಳಿದ ಪ್ರಸಂಗ ತಾಲ್ಲೂಕಿನ ನಾರಾಯಣಘಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿರುವ ಬಾವಿ ಕಟ್ಟೆ ಮೇಲೆ ಶುಕ್ರವಾರ ರಾತ್ರಿ 8 ಗಂಟೆಸುಮಾರಿಗೆಕುಳಿತಿದ್ದ ಮೋಹನ್ ಕುಮಾರ್ (40) ಬಾವಿಯೊಳಗೆ ಬಿದ್ದಿದ್ದಾರೆ. ಇವರು ಕೂಗಿಕೊಂಡಿದ್ದು, ಯಾರಿಗೂ ಕೇಳಿಸಿಲ್ಲ. ಬಾವಿಯಲ್ಲಿ ನೀರು ಇರಲಿಲ್ಲ. ಶನಿವಾರ ಬೆಳಿಗ್ಗೆ ಬಾವಿಯಿಂದ ಯಾರೋ ಕೂಗಿಕೊಳ್ಳುತ್ತಿರುವುದು ಗೊತ್ತಾಗಿಗ್ರಾಮಸ್ಥರು, ತಕ್ಷಣವೇಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಬಾವಿಯೊಳಗೆ ಬಿದ್ದಿದ್ದ ಮೋಹನ್ ಕುಮಾರ್ ಅವರನ್ನು ಅಗ್ನಿಶಾಮಕ ಸಿಬ್ಬಂದಿ ಮೇಲೆತ್ತಿದ್ದಾರೆ.ಎರಡೂ ಕಾಲು ಮುರಿದಿದ್ದು, ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.