ಹಾವೇರಿ: ತಾಲ್ಲೂಕಿನ ನರಸೀಪುರದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಮಾತನಾಡಿ, ಚೌಡಯ್ಯ ಸಮಾಜವನ್ನ ಎಸ್ ಟಿ ಗೆ ಸೇರಿಸಲು ಯಡಿಯೂರಪ್ಪ ಹುಟ್ಟಿ ಬಂದಿದ್ದಾರೆ.
ಸಮಾಜವನ್ನ ಎಸ್ ಟಿಗೆ ಸೇರಿಸಿದರೆ ಚಿಂಚನಸೂರ ದಂಪತಿಯ ತೊಡೆ ಚರ್ಮದಿಂದ ಸಿಎಂಗೆ ಪಾದರಕ್ಷೆ ಮಾಡಿಸಿಕೊಡ್ತೀವಿ.
ನಾವು ಅಂಬಿಗರು ನಂಬಿಗಸ್ಥರು, ಹೊಳೆ ದಾಟಿಸೋರು. ಅಂಬಿಗರು ಯಾರನ್ನೂ ಮುಳುಗಿಸೋದಿಲ್ಲ. ದೆಹಲಿಗೆ ಹೋಗಿ ಪ್ರಧಾನಿ ಮತ್ತು ಅಮಿತ್ ಶಾ ಭೇಟಿ ಮಾಡಿ ಎಸ್ ಟಿಗೆ ಸೇರಿಸಿ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.