ರಾಣೆಬೆನ್ನೂರ: ನಗರದ ಎನ್.ವಿ.ಆಸ್ಪತ್ರೆಯಲ್ಲಿ ಮಾರ್ಚ್ 19 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.
ಹೃದಯ ರೋಗ, ಮಧುಮೇಹ, ಜೀರ್ಣಾಂಗ ವ್ಯೂಹ, ಗ್ಯಾಸ್ಟ್ರಾಲಜಿ ಸಂಬಂಧಿತ ಸಮಸ್ಯೆಗಳನ್ನು ಡಾ. ಪ್ರಶಾಂತ್ ಪಾಟೀಲ, ಡಾ. ರಾಮಬೋಪಾಲ್ ನಾಂದೇಡ್ಲ, ಡಾ. ಸಂತೋಷ ಪಲ್ಲೇದ ತಪಾಸಣೆ ಮಾಡುವರು. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯಬೇಕೆಂದು ಎನ್.ವಿ.ಆಸ್ಪತ್ರೆಯ ವೈದ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.