ADVERTISEMENT

ಹಾವೇರಿ | ನಮ್ಮೂರ ಜಾತ್ರೆ: ಇಂದಿನಿಂದ ಫಲಪುಷ್ಪ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 8:21 IST
Last Updated 18 ಜನವರಿ 2024, 8:21 IST
ಹುಕ್ಕೇರಿಮಠದ ಜಾತ್ರೆ ಅಂಗವಾಗಿ ಫಲಪುಷ್ಪ ಪ್ರದರ್ಶನಕ್ಕಾಗಿ ತಯಾರಾಗುತ್ತಿರುವ ಪುಷ್ಪ ಗಡಿಯಾರವನ್ನು ಸದಾಶಿವ ಸ್ವಾಮೀಜಿ ಬುಧವಾರ ವೀಕ್ಷಿಸಿದರು. ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಮಠದ ಪದಾಧಿಕಾರಿಗಳು ಇದ್ದಾರೆ 
ಹುಕ್ಕೇರಿಮಠದ ಜಾತ್ರೆ ಅಂಗವಾಗಿ ಫಲಪುಷ್ಪ ಪ್ರದರ್ಶನಕ್ಕಾಗಿ ತಯಾರಾಗುತ್ತಿರುವ ಪುಷ್ಪ ಗಡಿಯಾರವನ್ನು ಸದಾಶಿವ ಸ್ವಾಮೀಜಿ ಬುಧವಾರ ವೀಕ್ಷಿಸಿದರು. ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಮಠದ ಪದಾಧಿಕಾರಿಗಳು ಇದ್ದಾರೆ    

ಹಾವೇರಿ: ಹುಕ್ಕೇರಿ ಮಠದ ‘ನಮ್ಮೂರ ಜಾತ್ರೆ’ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಫಲ-ಪುಷ್ಪ ಪ್ರದರ್ಶನವನ್ನು ಜ. 18ರಿಂದ 20ರವರೆಗೆ ಮೂರು ದಿನ ಹಾವೇರಿ ನಗರದ ಹುಕ್ಕೇರಿಮಠ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಹಾವೇರಿ ತೋಟಗಾರಿಕೆ ಇಲಾಖೆಯ ಕೇಂದ್ರ ಕಚೇರಿ ಸಹಾಯಕ ರಂಗಪ್ಪ ಸಿ.ಎನ್‌. ತಿಳಿಸಿದರು. 

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಉದ್ಘಾಟನಾ ಸಮಾರಂಭ ಜ.18ರಂದು ಸಂಜೆ 6ಕ್ಕೆ ನಡೆಯಲಿದ್ದು, ಹುಕ್ಕೇರಿಮಠ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಉದ್ಘಾಟನೆ ನೆರವೇರಿಸುವರು. ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು. 

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ‘ಜಾತ್ರೆ ಅಂಗವಾಗಿ ಬರುವ ಭಕ್ತರಿಗೆ, ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ 3 ದಿನಗಳ ಫಲಪುಷ್ಪ ಪ್ರದರ್ಶನ ಏರ್ಪಡಿಸಿದ್ದೇವೆ. ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಪ್ರವೇಶಾವಕಾಶ ಇರುತ್ತದೆ. ತೋಟಗಾರಿಕಾ ಬೆಳೆಗಳ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮತ್ತು ಮಾಹಿತಿ ನೀಡಲು ಈ ಪ್ರದರ್ಶನ ಸಹಕಾರಿಯಾಗಲಿದೆ’ ಎಂದು ಹೇಳಿದರು. 

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬರೆಗಾರ, ಮಠದ ಪದಾಧಿಕಾರಿಗಳಾದ ಎಸ್‌.ಎಸ್‌. ಮುಷ್ಟಿ, ಪಿ.ಡಿ. ಶಿರೂರ, ಆರ್‌.ಎಸ್‌. ಮಾಗನೂರ, ಆನಂದ ಅಟವಾಳಗಿ, ಸುಭಾಷ್‌ ಹುರುಳಿಕುಪ್ಪಿ, ಜಗದೀಶ ತುಪ್ಪದ ಇದ್ದರು. 

ಚಂದ್ರಯಾನ ಕಲಾಕೃತಿಯ ಮೆರುಗು
ಪ್ರತಿವರ್ಷದಂತೆ ಈ ಬಾರಿಯೂ ಹೂವು ಹಣ್ಣು ತರಕಾರಿಗಳಿಂದ ವಿವಿಧ ಕಲಾಕೃತಿಗಳನ್ನು ತಯಾರಿಸಿ ಪ್ರದರ್ಶನ ಮಾಡುತ್ತೇವೆ. ಭಾರತದ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಚಂದ್ರಯಾನ–3 ಯಶಸ್ವಿ ಉಡಾವಣೆ ಮಾಡಿದ ಅಂಗವಾಗಿ ಚಂದ್ರಯಾನ–3 ಮಿಷನ್‌ ವಿಕ್ರಂ  ಲ್ಯಾಂಡರ್‌ ಮತ್ತು ಇಸ್ರೊ ಸಂಸ್ಥೆಯ ಲೋಗೊ ಕಲಾಕೃತಿಯನ್ನು ಫಲಪುಷ್ಪಗಳಿಂದ ಪ್ರದರ್ಶಿಸಲಿದ್ದೇವೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬರೆಗಾರ ಹೇಳಿದರು. ಪುಷ್ಪ ಗಡಿಯಾರ ಹೂವಿನ ಆನೆ ಗೋಡಂಬಿ ಮಾದರಿಯ ಫೋಟೊ ಫ್ರೇಮ್‌ (ಸೆಲ್ಪಿ ಪಾಯಿಂಟ್‌) ದೀಪಗಳು ಕರ್ನಾಟಕ ನಕ್ಷೆ ಎಲೆ ಮೇಲೆ ಕುಳಿತ ಚಿಟ್ಟೆ ಕಾರಂಜಿ ಬಸವಣ್ಣ ಏಲಕ್ಕಿ ಗಣಪ ಈಶ್ವರ ಲಿಂಗ ಮುಂತಾದ ಕಲಾಕೃತಿಳನ್ನು ಫಲಪುಷ್ಪಗಳಲ್ಲಿ ಅರಳಿಸಿ ಪ್ರದರ್ಶಿಸಲಾಗುವುದು ಎಂದು ಮಾಹಿತಿ ನೀಡಿದರು. 

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.