ADVERTISEMENT

ಸಂಗೂರ ಸಕ್ಕರೆ ಕಾರ್ಖಾನೆ: ಅಧಿಕಾರಿಗಳನ್ನು ಕೂಡಿಹಾಕಿದ ಕಾರ್ಮಿಕರು

ಸಂಗೂರ ಸಕ್ಕರೆ ಕಾರ್ಖಾನೆ: ‘ಅರಿಯರ್ಸ್‌’ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 16:25 IST
Last Updated 22 ಜನವರಿ 2021, 16:25 IST
ಸಂಗೂರು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಸದಸ್ಯರು ಮತ್ತು ಅಧಿಕಾರಿಗಳನ್ನು ಕಚೇರಿಯಲ್ಲಿ ಕಾರ್ಮಿಕರು ಕೂಡಿ ಹಾಕಿರುವ ದೃಶ್ಯ 
ಸಂಗೂರು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಸದಸ್ಯರು ಮತ್ತು ಅಧಿಕಾರಿಗಳನ್ನು ಕಚೇರಿಯಲ್ಲಿ ಕಾರ್ಮಿಕರು ಕೂಡಿ ಹಾಕಿರುವ ದೃಶ್ಯ    

ಹಾವೇರಿ: ‘ಅರಿಯರ್ಸ್‌’ ಅನ್ನು ನೀಡದ ಕಾರಣಕ್ಕೆತಾಲ್ಲೂಕಿನ ಸಂಗೂರು ಗ್ರಾಮದ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಯಸ್ವಯಂ ನಿವೃತ್ತಿ ಪಡೆದ ಕಾರ್ಮಿಕರು ಶುಕ್ರವಾರ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಸದಸ್ಯರನ್ನು ಕೂಡಿಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ತಮಗೆ ಬರಬೇಕಾದ ಬಾಕಿ ವೇತನವನ್ನು ಕೊಡಿ ಎಂದು ಆಗ್ರಹಿಸಿದ ವೇಳೆ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆಯಿತು.

ಸ್ವಯಂ ನಿವೃತ್ತಿ ಪಡೆದಿದ್ದ ಕಾರ್ಮಿಕರು ಹಲವಾರು ವರ್ಷಗಳಿಂದ ಬರಬೇಕಿದ್ದ ವೇತನ ನೀಡುವಂತೆ ಆಗ್ರಹಿಸಿದರೂ ಸಹ ಬಾಕಿ ವೇತನ ನೀಡದಸಂಗೂರು ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ನಾಗಪ್ಪ ಕುಮ್ಮೂರು, ಅಧ್ಯಕ್ಷ ಗುರುನಾಥ್ ದೇಶಪಾಂಡೆ ಅವರನ್ನು ಕೂಡಿ ಹಾಕಿ ಕಚೇರಿಗೆ ಬೀಗ ಜಡಿದರು.

ADVERTISEMENT

ಈ ವೇಳೆ ಅಧಿಕಾರಿ ಹಾಗೂ ಆಡಳಿತ ಮಂಡಳಿಯವರು ಬಾಕಿ ವೇತನದ ಚೆಕ್‌ ಕೊಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಾರ್ಮಿಕರು ಪ್ರತಿಭಟನೆಯನ್ನು ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.