ADVERTISEMENT

ಕೊಟ್ಟಿದ್ದು ತುತ್ತೂರಿ ಬಂದಿದ್ದು ಕಹಳೆ ಊದುತ್ತಿರುವ ಮನುಷ್ಯ !

ಕಿಣ್ಣಿ ಸಡಕ್: ಮತದಾನ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 6:09 IST
Last Updated 22 ಡಿಸೆಂಬರ್ 2020, 6:09 IST
ಚಿಹ್ನೆ ಬದಲಾವಣೆಯಾಗಿ ಮತದಾನ ಸ್ಥಗಿತ
ಚಿಹ್ನೆ ಬದಲಾವಣೆಯಾಗಿ ಮತದಾನ ಸ್ಥಗಿತ   

ಕಮಲಾಪುರ (ಕಲಬುರ್ಗಿ ಜಿಲ್ಲೆ); ಚಿಹ್ನೆ ಬದಲಾವಣೆಯಾಗಿ ಮತದಾನ ಸ್ಥಗಿತಗೊಂಡ ಘಟನೆ ತಾಲ್ಲೂಕಿನ ಕಿಣ್ಣಿ ಸಡಕ್ ಗ್ರಾಮ ಪಂಚಾಯಿತಿಯ 7ನೇ ವಾರ್ಡ್ ಮತಗಟ್ಟೆಯಲ್ಲಿ ನಡೆದಿದೆ.

ವಾರ್ಡ್ ಸಂಖ್ಯೆ 7 ರ ಪರಿಶಿಷ್ಟ ಜಾತಿ ಸಾಮಾನ್ಯ ಸ್ಥಾನಕ್ಕೆ ಜಯರಾಜ ಎ ಹಲಗಿ ನಾಮಪತ್ರ ಸಲ್ಲಿಸಿದ್ದರು. ಇವರಿಗೆ 145 ತುತ್ತೂರಿ ಚಿಹ್ನೆ ನೀಡಲಾಗಿತ್ತು. ಇದೆ ಚಿಹ್ನೆ ಮೂಲಕ ಪ್ರಚಾರ ಕೈಗೊಂಡಿದ್ದಾರೆ. ಆದರೆ ಮತಪತ್ರದಲ್ಲಿ 181 ಕಹಳೆ ಊದುತ್ತಿರು ಮನುಷ್ಯನ ಚಿಹ್ನೆ ಮುದ್ರಣಗೊಂಡಿದೆ. ಅಭ್ಯರ್ಥಿ ಮತ ಚಲಾಯಿಸಲು ಹೋದಾಗ ಗಮನಿಸಿ ಮತಗಟ್ಟೆ ಅಧಿಕಾರಿಗೆ ತಿಳಿಸಿದ್ದು, ತಕ್ಷಣ ಮತದಾನ ಸ್ಥಗಿತ ಗೊಳಿಸಿದ್ದಾರೆ.

ಚುನಾವಣಾಧಿಕಾರಿ ವಿರುದ್ದ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಅಭ್ಯರ್ಥಿ ಕಣ್ಣೀರು ಹಾಕುತ್ತಿದ್ದಾರೆ. ತಪ್ಪಾಗಿದೆ ಕ್ಷಮಿಸಿ ಎಂದು ಚುನಾಣಾಧಿಕಾರಿ ಕೈಮುಗಿಯುತ್ತಿದ್ದಾರೆ. 7ನೇ ವಾರ್ಡ್ ನಲ್ಲಿ 3 ಸ್ಥಾನಗಳಿದ್ದು 10 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.