ADVERTISEMENT

ಕನ್ಹಯ್ಯಕುಮಾರ್ ಉಪನ್ಯಾಸ | ರದ್ದು, ಅನುಮತಿ, ರದ್ದು, ಸ್ಥಳಾಂತರ, ಮತ್ತೆ ರದ್ದು!

ಪೊಲೀಸರ ಪೂರ್ವಾನುಮತಿ ಪಡೆಯದ ಕಾರಣ ಉಪನ್ಯಾಸ ಮತ್ತೆ ರದ್ದು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 7:50 IST
Last Updated 15 ಅಕ್ಟೋಬರ್ 2019, 7:50 IST
ಕನ್ಹಯ್ಯಕುಮಾರ್ ಕಾರ್ಯಕ್ರಮ ರದ್ದಾಗಿದ್ದರಿಂದ ಪ್ರೇಕ್ಷಕರು ಕಲಬುರ್ಗಿಯ ವಿಶ್ವೇಶ್ವರಯ್ಯ ಇನ್ ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಭಾಂಗಣದಿಂದ ಹೊರಗೆ ಬಂದರು.
ಕನ್ಹಯ್ಯಕುಮಾರ್ ಕಾರ್ಯಕ್ರಮ ರದ್ದಾಗಿದ್ದರಿಂದ ಪ್ರೇಕ್ಷಕರು ಕಲಬುರ್ಗಿಯ ವಿಶ್ವೇಶ್ವರಯ್ಯ ಇನ್ ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಭಾಂಗಣದಿಂದ ಹೊರಗೆ ಬಂದರು.   

ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯವು ಕನ್ಹಯ್ಯಕುಮಾರ್ ಅವರಿಗೆ ನೀಡಿದ ಅನುಮತಿ ಹಿಂದಕ್ಕೆ ಪಡೆದಿದ್ದರಿಂದ ನಗರದ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೂ ರದ್ದಾಯಿತು.

ಈ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆಗೆ ಪೊಲೀಸರ ಪೂರ್ವಾನುಮತಿ ಪಡೆದಿರಲಿಲ್ಲ. ಹೀಗಾಗಿ ಕಾರ್ಯಕ್ರಮ ರದ್ದುಗೊಳಿಸಿ ಎಂದು ಸ್ಟೇಶನ್ ಬಜಾರ್ ಠಾಣೆ ‌ಪೊಲೀಸರು ಸಂಘಟಕರಿಗೆ ಸೂಚನೆ ನೀಡಿದರು. ಹೀಗಾಗಿ ಅನಿವಾರ್ಯವಾಗಿ ಉಪನ್ಯಾಸ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.

ಸಂಜೆ 4ಕ್ಕೆ ನಿಗದಿಯಂತೆ ನಗರದ ಅಂಬೇಡ್ಕರ್ ಕಾಲೇಜಿನಲ್ಲಿ ಕನ್ಹಯ್ಯಕುಮಾರ್ ಉಪನ್ಯಾಸ ನಡೆಯಲಿದೆ ಎಂದು ಸಂಘಟಕಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಂಚಾಲಕಿ ಕೆ.ನೀಲಾ ತಿಳಿಸಿದರು.

ADVERTISEMENT

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.