ADVERTISEMENT

PHOTOS | ರೈಲು ವಿಳಂಬ: KPSC ಪರೀಕ್ಷೆಗೆ ಗೈರಾದ ಆಕಾಂಕ್ಷಿಗಳಿಂದ ಪ್ರತಿಭಟನೆ

ಕಲಬುರಗಿಯಲ್ಲಿ ಮಂಗಳವಾರ ನಡೆಯಬೇಕಿದ್ದ KPSC ಪರೀಕ್ಷೆಗೆ ಹಾಜರಾಗಲು ತೆರಳುತ್ತಿದ್ದ ಅಕಾಂಕ್ಷಿಗಳಿದ್ದ ರೈಲು ವಿಳಂಬವಾಗಿ ತೊಂದರೆ ಅನುಭವಿಸುವಂತಾಯಿತು.

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 7:27 IST
Last Updated 14 ಡಿಸೆಂಬರ್ 2021, 7:27 IST
ಕಲಬುರಗಿಯಲ್ಲಿ ಮಂಗಳವಾರ ನಡೆಯಬೇಕಿದ್ದ KPSC ಪರೀಕ್ಷೆಗೆ ಹಾಜರಾಗಲು ತೆರಳುತ್ತಿದ್ದ ಅಕಾಂಕ್ಷಿಗಳಿದ್ದ ರೈಲು ವಿಳಂಬವಾಗಿ ತೊಂದರೆ ಅನುಭವಿಸುವಂತಾಯಿತು.
ಕಲಬುರಗಿಯಲ್ಲಿ ಮಂಗಳವಾರ ನಡೆಯಬೇಕಿದ್ದ KPSC ಪರೀಕ್ಷೆಗೆ ಹಾಜರಾಗಲು ತೆರಳುತ್ತಿದ್ದ ಅಕಾಂಕ್ಷಿಗಳಿದ್ದ ರೈಲು ವಿಳಂಬವಾಗಿ ತೊಂದರೆ ಅನುಭವಿಸುವಂತಾಯಿತು.   
ಕೆಪಿಎಸ್‌ಸಿ ನಡೆಸುತ್ತಿರುವ ಲೋಕೋಪಯೋಗಿ ಇಲಾಖೆಯ ಎಇ ಪರೀಕ್ಷೆ ಬರೆಯುವುದಕ್ಕೆ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಕಲಬುರ್ಗಿ ತಲುಪಬೇಕಿದ್ದವರು, 9 ಗಂಟೆಯಾದರೂ ರಾಯಚೂರಿನಲ್ಲೇ ಉಳಿಯುವಂತಾಗಿದೆ.
ರೊಚ್ಚಿಗೆದ್ದ ಉದ್ಯೋಗ ಅಕಾಂಕ್ಷಿಗಳೆಲ್ಲ ಹಾಸನ-ಸೋಲ್ಲಾಪುರ ರೈಲು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಸುಮಾರು 800 ಕ್ಕೂ ಹೆಚ್ಚು ಆಕಾಂಕ್ಷಿಗಳು ಕೆಪಿಎಸ್‌ಸಿ ವಿರುದ್ಧ ಘೋಷಣೆ ಕೂಗುತ್ತಿದ್ದು, ಪರೀಕ್ಷೆ ದಿನವನ್ನು ಮತ್ತೊಮ್ಮೆ ನಿಗದಿ ಮಾಡಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದಿದ್ದು, ಎಲ್ಲರನ್ನು ಚದುರಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಘೋಷಣೆ ಕೂಗುತ್ತಿರುವ ಪರೀಕ್ಷಾರ್ಥಿಗಳು ಜಾಗ ಬಿಟ್ಟು ಕದಲುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.