ADVERTISEMENT

ಚಿಂಚೋಳಿ | ಮಹಾಶಿವರಾತ್ರಿ ಸಂಭ್ರಮ: ಪಂಚಲಿಂಗೇಶ್ವರ ಪಾಪನಾಶ ಬುಗ್ಗೆಗೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 4:49 IST
Last Updated 16 ಫೆಬ್ರುವರಿ 2026, 4:49 IST
ಚಿಂಚೋಳಿ ಪಟ್ಟಣದ ಹೊರ ವಲಯದ ಪಾಪನಾಶ ಪಂಚಲಿಂಗೇಶ್ವರ ಬುಗ್ಗೆಗೆ ಆಗಮಿಸಿದ ಭಕ್ತರು ಭಾನುವಾರ ಪಂಚಲಿAಗಗಳ ದರ್ಶನ ಪಡೆದು ನೈವೇದ್ಯ ಸಮರ್ಪಿಸಿ ಕೃತಾರ್ಥರಾದರು
ಚಿಂಚೋಳಿ ಪಟ್ಟಣದ ಹೊರ ವಲಯದ ಪಾಪನಾಶ ಪಂಚಲಿಂಗೇಶ್ವರ ಬುಗ್ಗೆಗೆ ಆಗಮಿಸಿದ ಭಕ್ತರು ಭಾನುವಾರ ಪಂಚಲಿAಗಗಳ ದರ್ಶನ ಪಡೆದು ನೈವೇದ್ಯ ಸಮರ್ಪಿಸಿ ಕೃತಾರ್ಥರಾದರು   

ಚಿಂಚೋಳಿ: ತಾಲ್ಲೂಕಿನಲ್ಲಿ ಮಹಾಶಿವರಾತ್ರಿಯನ್ನು ಭಕ್ತಿಶ್ರದ್ಧೆಯಿಂದ ಭಾನುವಾರ ಎಲ್ಲೆಡೆ ಆಚರಿಸಲಾಯಿತು.

ಮಹಾಶಿವರಾತ್ರಿ ಅಂಗವಾಗಿ ದೇವಾಲಯಗಳಿಗೆ ಭಕ್ತರ ದಂಡೆ ಲಗ್ಗೆ ಇರಿಸಿದರೆ, ಹೋಮ ಹವನ, ಇಷ್ಟಲಿಂಗ ಪೂಜೆ, ಶಿವ ಭಜನೆ, ಪಾರಾಯಣದೊಂದಿಗೆ ದೇವರ ದರ್ಶನ ಮಾಡಿ ಮಹಾಶಿವರಾತ್ರಿಗೆ ತೆರೆ ಎಳೆದರು.

ಹಬ್ಬದ ಪ್ರಯುಕ್ತ ಬೆಳಿಗ್ಗೆಯಿಂದಲೇ ಉಪವಾಸ ಆಚರಿಸಿದ ಭಕ್ತರು, ಸಂಜೆಗೆ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರೆ ಲಿಂಗಾಯತರು ಮನೆಗಳಲ್ಲಿ ಇಷ್ಟಲಿಂಗ ಪೂಜೆಯೊಂದಿಗೆ ಉಪವಾಸಕ್ಕೆ ತೆರೆ ಎಳೆದರು. ಬಹುತೇಕ ದೇವಾಲಯಗಳಲ್ಲಿ ರಾತ್ರಿ ಜಾಗರಣ ಹಮ್ಮಿಕೊಳ್ಳಲಾಗಿದೆ.

ADVERTISEMENT

ಪಟ್ಟಣದ ಹೊರ ವಲಯದ ಪಾಪನಾಶ ಪಂಚಲಿಂಗೇಶ್ವರ ಬುಗ್ಗೆಯಲ್ಲಿ ಸಾವಿರಾರು ಮಹಿಳೆಯರು ಪಂಚಲಿಂಗಗಳ ದರ್ಶನ ಪಡೆದು ನೈವೇದ್ಯ ಅರ್ಪಿಸಿ ಕೃತಾರ್ಥರಾದರು. ಬಂದ ಭಕ್ತರಿಗೆ ಅಲ್ಪೋಹಾರದ ವ್ಯವಸ್ಥೆ ಮಾಡಲಾಗಿತ್ತು. ಸಂತ ನಿರಹಂಕಾರ ಸತ್ಸಂಗ ಕೂಟದಲ್ಲಿ ಸುನೀತಾ ವಿಜಯಕುಮಾರ ನಾರಾ ಅವರಿಂದ ಅನುಭಾವ ನಡೆಯಿತು. ಬ್ರಹ್ಮ ಈಶ್ವರೀಯ ವಿವಿಯ ಶಾಖೆಯಿಂದ ಬಿಕೆ ವಿಜಯಲಕ್ಷ್ಮಿ ನೇತೃತ್ವದಲ್ಲಿ ಆತ್ಮ ಪರಮಾತ್ಮನ ಕುರಿತಾದ ಚಿತ್ರಪಟಗಳ ಪ್ರದರ್ಶನ ನಡೆಯಿತು.

ಚಿಂಚೋಳಿ ಪಟ್ಟಣದ ಹೊರ ವಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ಪಾಪನಾಶ ಬುಗ್ಗೆಯಲ್ಲಿರುವ ಪಂಚಲಿಂಗೇಶ್ವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿರುವ ಮಹಿಳಾ ಭಕ್ತರ ದಂಡು

ಡಾ. ಕಿಶನರಾವ್ ಕಾಟಾಪುರ, ಗೌತಮ ಪಾಟೀಲ, ರೇವಣಸಿದ್ದಪ್ಪ ದಾದಾಪುರ, ಉಮಾ ಪಾಟೀಲ, ನರಸಣ್ಣ ನಾಟಿಕಾರ, ಮಲ್ಲಿಕಾರ್ಜುನ ಚಿಂಚೋಳಿ, ವಸಂತ ಇಟಗಿ, ಜಗನ್ನಾಥ ಅಗ್ನಿಹೋತ್ರಿ, ಅನಂತ ಪುರಾಣಿಕ, ವಾಸುದೇವ ಸೊಂಡೂರು, ಪ್ರಾಣೇಶ, ಶ್ರೀಕಾಂತ ನಾಟಿಕಾರ, ಜಗನ್ನಾಥ ಪೂಜಾರಿ ಶಾಂತವೀರ ಹೀರಾಪುರ ಸೇರಿದಂತೆ ಅನೇಕರು ಇದ್ದರು.

ಚಿಂಚೋಳಿ ಪಟ್ಟಣದ ಹೊರ ವಲಯದ ಪಾಪನಾಶ ಪಂಚಲಿಂಗೇಶ್ವರ ಬುಗ್ಗೆಗೆ ಆಗಮಿಸಿದ ಭಕ್ತರಿಗೆ ಮಹಾಶಿವರಾತ್ರಿ ಪ್ರಯುಕ್ತ ಅಲ್ಪೋಪಹಾರ ದಾಸೋಹ ಸೇವೆ ಸಲ್ಲಿಸಲಾಯಿತು

ಮಿರಿಯಾಣ ವರದಿ: ತಾಲ್ಲೂಕಿನ ಗಡಿಗ್ರಾಮದ ಮಿರಿಯಾಣದ ಪಾಪನಾಶ ಮಂದಿರದಲ್ಲಿ ಕರ್ನಾಟಕ ಮತ್ತು ತೆಲಂಗಾಣದ ಭಕ್ತರು ಪಲ್ಲಕ್ಕಿ ಸೇವೆ, ಜ್ಯೋತಿ ಯಾತ್ರೆ ನಡೆಸಿ ಶಿವ ಚರಿತ್ರೆ ಪಾರಾಯಣ ಮತ್ತು ಭಜನೆ ನಡೆಸಿ ಭಕ್ತಿಯಲ್ಲಿ ಮಿಂದೆದ್ದರು.

ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ಆಗಮಿಸಿದ ಭಕ್ತರು ಸೂರ್ಯಾಸ್ತದವರೆಗೆ ದೇವಾಲಯದಲ್ಲಿ ಧ್ಯಾನ, ಪೂಜೆ, ಭಜನೆಯಲ್ಲಿ ತೊಡಗಿ ಸಂಜೆಗೆ ಹೂವಿನತೋಟದ ವೀರಭದ್ರೇಶ್ವರ ದೇವಾಲಯಕ್ಕೆ ತೆರಳಿ ಇಡಿ ರಾತ್ರಿ ಜಾಗರಣೆ ನಡೆಸಿದರು.

ವಿಕಾರಾಬಾದನ ವಕೀಲ ಗೋಪಾಲರೆಡ್ಡಿ, ಚನ್ನಬಸಯ್ಯ ಸ್ವಾಮಿ, ಷಡಕ್ಷರಿ ಸ್ವಾಮಿ, ಪಚಾಕ್ಷರಿ ಸ್ವಾಮಿ, ಜಗಜೀವನರೆಡ್ಡಿ ಪಾಟೀಲ, ನಾರಾಯಣ ಗೌಡ, ಸಿದ್ದಯ್ಯ ಗೌಡ, ರಾಚಪ್ಪ ಸೋಮನೋರ್, ಶ್ರೀಕಾಂತ ಪೂಜಾರಿ, ಗ್ರಾ.ಪಂ ಮಾಜಿ ಅಧ್ಯಕ್ಷ ಬಸವರಾಜ ಕಿಷ್ಟಾಪುರ, ವೀರೇಂದ್ರ, ಸಂಜೀವ ಮೊದಲಾದವರು ಇದ್ದರು.

ಚಿಂಚೋಳಿ ತಾಲ್ಲೂಕು ಮಿರಿಯಾಣದ ಪಾಪನಾಶ ಮಂದಿರದಲ್ಲಿ ಕರ್ನಾಟಕ ತೆಲಂಗಾಣ ಭಕ್ತರು ಭಜನೆಯಲ್ಲಿ ತೊಡಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.