ADVERTISEMENT

ಶ್ರದ್ದಾಭಕ್ತಿಯಿಂದ ನಡೆದ ಕುಶಾಲನಗರ ಗಣಪತಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2023, 9:50 IST
Last Updated 1 ಡಿಸೆಂಬರ್ 2023, 9:50 IST
   

ಕುಶಾಲನಗರ (ಕೊಡಗು): ಸಾವಿರಾರು ಭಕ್ತರ ಸಮ್ಮುಖದಲ್ಲಿ ಇಲ್ಲಿನ ಗಣಪತಿ ದೇವಾಲಯದ ರಥೋತ್ಸವ ಶ್ರದ್ಧಾಭಕ್ತಿಯಿಂದ ಶುಕ್ರವಾರ ನೆರವೇರಿತು.

ಸಾಂಪ್ರದಾಯಿಕ ಪೂಜಾ ವಿಧಿ ಬಳಿಕ ಆರಂಭವಾದ ರಥೋತ್ಸವವು ಗಣಪತಿ ದೇವಾಲಯದಿಂದ ಆಂಜನೇಯ ದೇವಾಲಯದವರೆಗೆ ಜರುಗಿತು.

ಭಕ್ತರು ಈಡುಗಾಯಿ ಒಡೆಯುವ ಮೂಲಕ ಹರಕೆ ಸಲ್ಲಿಸಿದರು.

ADVERTISEMENT

ಹಾಸನ ಮೈಸೂರು ಗಡಿ ಭಾಗದ ಜನರು ಸೇರಿದಂತೆ ಕೊಡಗಿನ ಜನರು ರಥೋತ್ಸವದಲ್ಲಿ ಭಾಗಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.