ADVERTISEMENT

ಕೊಡವ ಸಾಧಕರಿಗೆ ಅಕಾಡೆಮಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 20:34 IST
Last Updated 28 ಫೆಬ್ರುವರಿ 2026, 20:34 IST
ಗೋಣಿಕೊಪ್ಪಲು ಬಳಿಯ ಕುಟ್ಟದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಸಾಧಕರನ್ನು ಶಾಸಕ ಎ.ಎಸ್.ಪೊನ್ನಣ್ಣ, ಅಕಾಡೆಮಿ ಅಧ್ಯಕ್ಷ ಅಜ್ನಿಕಂಡ ಮಹೇಶ್ ನಾಚಯ್ಯ ಸನ್ಮಾನಿಸಿದರು
ಗೋಣಿಕೊಪ್ಪಲು ಬಳಿಯ ಕುಟ್ಟದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಸಾಧಕರನ್ನು ಶಾಸಕ ಎ.ಎಸ್.ಪೊನ್ನಣ್ಣ, ಅಕಾಡೆಮಿ ಅಧ್ಯಕ್ಷ ಅಜ್ನಿಕಂಡ ಮಹೇಶ್ ನಾಚಯ್ಯ ಸನ್ಮಾನಿಸಿದರು   

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಇಲ್ಲಿನ ಕುಟ್ಟದಲ್ಲಿ ಶನಿವಾರ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಬ ಗೌರವ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. 

ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಕುಟ್ಟ ಕೊಡವ ಸಮಾಜಕ್ಕೆ ಜಾಗ ದಾನ ನೀಡಿದ ಮುಕ್ಕಾಟಿರ ರಾಜ ಮಂದಣ್ಣ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು.

‘ಕೊಡವ ಸಂಸ್ಕೃತಿ ಮುಂದಿನ ತಲೆಮಾರಿಗೂ ಉಳಿಯಲಿ’ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಆಶಿಸಿದರು. 

ADVERTISEMENT

‘ಕೊಡವ ಭಾಷೆ, ಆಚಾರ, ವಿಚಾರ, ಸಂಸ್ಕೃತಿ, ಪರಂಪರೆ ಉಳಿಸಲು ಉಳಿಸುವಲ್ಲಿ, ಕೊಡವ ಭಾಷಿಕರಾದ 23 ಸಮಾಜಗಳನ್ನು ಒಟ್ಟುಗೂಡಿಸಿ ಅಕಾಡೆಮಿ ಮುನ್ನಡೆಯುತ್ತಿರುವುದು ವಿಶೇಷ’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಶ್ಲಾಘಿಸಿದರು.

ಕಾರ್ಯಕ್ರಮವನ್ನು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಶನಿವಾರ ಉದ್ಘಾಟಿಸಿದರು

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ‘ಕೊಡವ ಸಾಹಿತ್ಯವೊಂದೇ ಕೊಡವ ಸಂಸ್ಕೃತಿಯ ಆಧಾರ ಸ್ತಂಭವಾಗಿದೆ’ ಎಂದು ಹೇಳಿದರು.

ಕೊಡವ ಸಂಸ್ಕೃತಿ ಗುಣ-ಲಕ್ಷಣ ಮತ್ತು ನೀತಿ-ನಡತೆ’ ಕುರಿತು ಅಭಿಮನ್ಯು ಫೌಂಡೇಷನ್ ಅಧ್ಯಕ್ಷ, ಖ್ಯಾತ ಅಂತರಾಪ್ಟ್ರೀಯ ಕ್ರೀಡಾಪಟು ತೀತಮಡ ಅರ್ಜುನ್ ದೇವಯ್ಯ, ‘ಕೊಡವ ಭಾಷೆ ಸಂರಕ್ಷಣೆಯಲ್ಲಿ ಜನಾಂಗದವರ ಜವಾಬ್ದಾರಿ’ ಕುರಿತು ಡಾ.ತೀತಿರ ರೇಖಾ ವಸಂತ ವಿಚಾರ ಮಂಡಿಸಿದರು.

‘ಕೊಡವ ಪುಸ್ತಕ ಪತ್ತಾಯ(‍ಪುಸ್ತಕ ಭಂಡಾರ)’ವನ್ನು ಕುಟ್ಟ ಕೊಡವ ಸಮಾಜದಲ್ಲಿ ಆರಂಭಿಸಲಾಯಿತು.

ಗೋಣಿಕೊಪ್ಪಲು ಬಳಿಯ ಕುಟ್ಟದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಸಮಾರಂಭಕ್ಕೂ ಮುನ್ನ ಆಕರ್ಷಕ ಮೆರವಣಿಗೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.