ADVERTISEMENT

ಕುಶಾಲನಗರದಲ್ಲಿ ವಿಜೃಂಭಣೆಯ ಗಣಪತಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 11:24 IST
Last Updated 8 ನವೆಂಬರ್ 2025, 11:24 IST
<div class="paragraphs"><p>ಕುಶಾಲನಗರದಲ್ಲಿ ವಿಜೃಂಭಣೆಯ ಗಣಪತಿ ರಥೋತ್ಸವ</p><p></p></div>

ಕುಶಾಲನಗರದಲ್ಲಿ ವಿಜೃಂಭಣೆಯ ಗಣಪತಿ ರಥೋತ್ಸವ

   

ಕುಶಾಲನಗರ (ಕೊಡಗು ಜಿಲ್ಲೆ): ಕೊಡಗು ಜಿಲ್ಲೆಯ ಕುಶಾಲನಗರದಲ್ಲಿರುವ ಗಣಪತಿ ದೇವಾಲಯದ ವಾರ್ಷಿಕ ರಥೋತ್ಸವ ಶನಿವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.

ADVERTISEMENT

ಗಣಪತಿ ದೇಗುಲದಿಂದ ಆಂಜನೇಯಸ್ವಾಮಿ ದೇವಸ್ಥಾನದವರೆಗೆ 22 ಅಡಿ ಎತ್ತರದ ರಥವನ್ನು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಎಳೆದರು. ಹರಕೆ ಹೊತ್ತ ಭಕ್ತರು ನೂರಾರು ಸಂಖ್ಯೆಯಲ್ಲಿ ಈಡುಗಾಯಿ ಒಡೆದರು. ನವದಂಪತಿಗಳು ರಥಕ್ಕೆ ಹಣ್ಣು, ಜವನ ಎಸೆದು ಪ್ರಾರ್ಥಿಸಿದರು.

ಕೊಡಗು ಮಾತ್ರವಲ್ಲ, ಮೈಸೂರು, ಹಾಸನ, ಮಂಡ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಜಾತ್ರೆಯಲ್ಲಿ ಭಾಗವಹಿಸಿದ್ದರು. ದೇವಸ್ಥಾನ ಸಮಿತಿ ವತಿಯಿಂದ ಎಲ್ಲ ಭಕ್ತರಿಗೂ ಪ್ರಸಾದ ವಿನಿಯೋಗ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.