ADVERTISEMENT

ಮಡಿಕೇರಿ ದಸರೆ: ಗುಂಪು ಚದುರಿಸುವಾಗ ಡಿವೈಎಸ್ಪಿ, ಕಾನ್‌ಸ್ಟೆಬಲ್ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 4:20 IST
Last Updated 3 ಅಕ್ಟೋಬರ್ 2025, 4:20 IST
<div class="paragraphs"><p>ಮಡಿಕೇರಿ ದಸರಾ ವೇದಿಕೆಯಲ್ಲಿ ಪ್ರತಿಭಟನೆ</p></div>

ಮಡಿಕೇರಿ ದಸರಾ ವೇದಿಕೆಯಲ್ಲಿ ಪ್ರತಿಭಟನೆ

   

ಮಡಿಕೇರಿ: ಇಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ದಸರಾ ದಶ ಮಂಟಪಗಳ ಶೋಭಾಯಾತ್ರೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ವೇದಿಕೆ ಏರಿದ ಕೆಲವರು ಘೋಷಣೆಗಳು ಕೂಗಿದರು. ಈ ವೇಳೆ ಗುಂಪನ್ನು ಚೆದುರಿಸುವಾಗ ಕಿಡಿಗೇಡಿಗಳು ಡಿವೈಎಸ್ಪಿ ಸೂರಜ ಹಾಗೂ ಹೆಡ್‌ಕಾನ್‌ಸ್ಟೆಬಲ್ ಉದಯ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ರಾತ್ರಿ ಆರಂಭವಾದ ಶೋಭಾಯಾತ್ರೆ ಬೆಳಿಗ್ಗೆಯವರೆಗೂ ನಡೆಯಿತು. ಗಾಂಧಿ ಮೈದಾನದಲ್ಲಿ ಮಂಟಪಗಳಿಗೆ ಬಹುಮಾನ ಘೋಷಣೆ ಮಾಡಿದಾಗ ಕೆಲವರು 'ಮೋಸ ಮೋಸ' ಎಂದು ಘೋಷಣೆ ಕೂಗಿ ವೇದಿಕೆ ಏರಿ ಪೀಠೋಪಕರಣಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು‌. ಈ ವೇಳೆ ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು.

ADVERTISEMENT

ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.