ಸಿದ್ದಾಪುರ: ಕಾಫಿ ತೋಟಗಳಿಗೆ ನುಗ್ಗಿದವೆಂಬ ಕಾರಣಕ್ಕೆ ಮಾಲೀಕ ನರೇಂದ್ರ ನಾಯ್ಡು ಎಂಬುವವರು ಗುಂಡು ಹಾರಿಸಿ, ಎರಡು ಹಸುಗಳನ್ನು ಹತ್ಯೆ ಮಾಡಿದ್ದಾರೆ.
ಹಸುಗಳ ಮಾಲೀಕ, ಗುಹ್ಯ ಗ್ರಾಮದ ನಿವಾಸಿ ಸಿ.ಕೆ.ಮಣಿ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಾಗಿ ಹುಡುಕಾಟ ನಡೆದಿದೆ
‘ಮಣಿ ಅವರು ಭಾನುವಾರ ತಮ್ಮ ಗದ್ದೆಯಲ್ಲಿ ಹಸುಗಳನ್ನು ಮೇಯಲು ಬಿಟ್ಟಿದ್ದರು. ಮಧ್ಯಾಹ್ನ ಊಟದ ವೇಳೆ ಮನೆಗೆ ಬಂದು ಹಿಂತಿರುಗುವಾಗ 3 ಹಸುಗಳು ಕಾಣೆಯಾಗಿದ್ದವು. ರಾತ್ರಿ ಗುಂಡೇಟಿನಿಂದ ಗಾಯಗೊಂಡ ಒಂದು ಹಸು ಮನೆಗೆ ಬಂದಿತ್ತು. ಸೋಮವಾರ ಸಂಜೆ ಎರಡು ಹಸುಗಳ ಮೃತದೇಹಗಳು ತೋಟದಲ್ಲಿ ಪತ್ತೆಯಾಗಿದ್ದವು’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.