ADVERTISEMENT

ಕೋಲಾರ ಕ್ಷೇತ್ರದಲ್ಲಿ ಸುತ್ತಲಿನವರಿಂದಲೇ ಸಿದ್ದರಾಮಯ್ಯಗೆ ಸೋಲು: ಸಚಿವ ಮುನಿರತ್ನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 15:02 IST
Last Updated 11 ಮಾರ್ಚ್ 2023, 15:02 IST
ಮುನಿರತ್ನ ಹಾಗೂ ಸಿದ್ದರಾಮಯ್ಯ
ಮುನಿರತ್ನ ಹಾಗೂ ಸಿದ್ದರಾಮಯ್ಯ   

ಕೋಲಾರ: ‘ಸಿದ್ದರಾಮಯ್ಯ ಪ್ರತಿ ಬಾರಿ ತಮ್ಮ ಕೊನೆಯ ಚುನಾವಣೆ ಎನ್ನುತ್ತಿದ್ದಾರೆ. ಬಾದಾಮಿಯಲ್ಲೂ ಇದೇ ವಿಚಾರ ಹೇಳಿ ಕೋಲಾರಕ್ಕೆ ಬಂದಿದ್ದಾರೆ’ ಎಂದು ಸಚಿವ ಮುನಿರತ್ನ ಶನಿವಾರ ಇಲ್ಲಿ ಟೀಕಿಸಿದರು.

‘ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ನಾವು 10 ವಿದ್ಯೆ ಪ್ರಯೋಗಿಸಿದರೆ, ಅವರ ಸುತ್ತಮುತ್ತ ಇರುವವರು 20 ವಿದ್ಯೆ ಪ್ರಯೋಗಿಸುತ್ತಾರೆ. ಹೀಗಾಗಿ, ಅವರಿಗೆ ಸೋಲು ಖಚಿತ’ ಎಂದರು.

‘ತಾಕತ್ತಿದ್ದರೆ ಚಾಮುಂಡೇಶ್ವರಿಯಲ್ಲಿ ಗೆದ್ದು ತೋರಿಸಲಿ. ಇಲ್ಲದಿದ್ದರೆ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಕನಕಪುರ ಕ್ಷೇತ್ರ ಬಿಟ್ಟುಕೊಡಲಿ. ಕೋಲಾರದ ಶಾಸಕ ಕೆ.ಶ್ರೀನಿವಾಸಗೌಡ ಏನು ಪಾಪ ಮಾಡಿದ್ದಾರೆ? ಜೆಡಿಎಸ್‌ನಿಂದ ಗೆದ್ದ ಅವರ ಸ್ಥಾನವನ್ನು ಏಕೆ ಕಿತ್ತುಕೊಂಡರು’ ಎಂದು ಪ್ರಶ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.