ಯಲಬುರ್ಗಾ: ತಾಲ್ಲೂಕಿನ ಕುದ್ರಿಕೋಟಗಿ ಗ್ರಾಮದ ಹತ್ತಿರ ಶುಕ್ರವಾರ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತರಾಗಿದ್ದು, ಇನ್ನೊಬ್ಬರಿಗೆ ಬಲವಾದ ಗಾಯವಾಗಿರುವ ಘಟನೆ ಜರುಗಿದೆ.
ಬೈಕ್ನಲ್ಲಿ ಸಂಚಾರದ ಸಂದರ್ಭದಲ್ಲಿ ದಿಢೀರನೆ ಹಾವು ರಸ್ತೆಯ ಮೇಲೆ ಅಡ್ಡ ಹರಿದು ಬಂದಿದ್ದರಿಂದ ಹಾವಿನ ಮೇಲೆ ಗಾಲಿ ಹರಿಯುತ್ತದೆಂದು ಗಾಬರಿಗೊಂಡು ಸವಾರ ಬ್ರೇಕ್ ಹಾಕಿದ್ದಾರೆ. ನಿಯಂತ್ರಣ ತಪ್ಪಿ ಮುಗುಚಿಬಿದ್ದ ಪರಿಣಾಮ ಸವಾರರಿಗೆ ಗಾಯವಾಗಿದೆ. ಸ್ಥಳೀಯ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಭೀಮಪ್ಪ ಕುರಿ(70) ಎಂಬುವರು ಮೃತರಾಗಿದ್ದಾರೆ. ಜೊತೆಗಿದ್ದ ಹನಮಪ್ಪ ಬಸಪ್ಪ ಕುರಿ ಎಂಬುವರಿಗೆ ಗಾಯವಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡ ಸ್ಥಳೀಯ ಠಾಣೆಯ ಪಿಎಸ್ಐ
ಶಿವಕುಮಾರ ಮುಗ್ಗಳ್ಳಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.