ADVERTISEMENT

ಕೊಪ್ಪಳ: ಶ್ರೀರಾಮ ಮಂದಿರಕ್ಕೆ ದೇಣಿಗೆ

₹3 ಸಾವಿರ ಮೌಲ್ಯದ ₹5ರ ನಾಣ್ಯ: ತುಲಾಭಾರ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 7:11 IST
Last Updated 18 ಫೆಬ್ರುವರಿ 2021, 7:11 IST
ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲಾಯಿತು
ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲಾಯಿತು   

ಅಳವಂಡಿ: ಅಯೋಧ್ಯೆದಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮಮಂದಿರ ನಿರ್ಮಾಣಕ್ಕೆ ಮೂರು ತಿಂಗಳ ಮಗುವಿನ ತೂಕದಷ್ಟು ನಾಣ್ಯಗಳನ್ನು ತೂಗಿಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಲಾಯಿತು.

ಸಮೀಪದ ಭೈರಾಪುರ ಗ್ರಾಮದ ದೇವೇಂದ್ರಪ್ಪ ಮತ್ತು ಬುಡ್ಡಮ್ಮ ಪೂಜಾರ ಕುಟುಂಬ ಮೂರು ತಿಂಗಳದ 5 ಕೆಜಿ ಮಗುವಿನ ತೂಕದ ₹3 ಸಾವಿರ ಮೌಲ್ಯದ ₹5ರ ನಾಣ್ಯಗಳ ಮೂಲಕ ತೂಗಿ ನಿಧಿ ಸಮರ್ಪಣೆ ಮಾಡಿ ಭಕ್ತಿ ಮೆರೆದರು.

‘ಮಗುವಿನ ಶ್ರೇಯಸ್ಸು ಮತ್ತು ಭಗವಾನ್‌ ರಾಮನ ಆಶೀರ್ವಾದ ತಮ್ಮ ಕುಟುಂಬದ ಮೇಲೆ ಇರಲಿ ಎಂದು ಹರಕೆ ಹೊತ್ತು ನಿಧಿಯನ್ನು ತನುಮನದಿಂದ ಸಮರ್ಪಿಸಿದ್ದೇವೆ’ ಎಂದು ಕುಟುಂಬದ ಸದಸ್ಯರು ಹೇಳಿದರು. ಬಿಜೆಪಿಗ್ರಾಮೀಣ ಮಂಡಲದ ಉಪಾಧ್ಯಕ್ಷ ಬಸವರಡ್ಡಿ ರಡ್ಡೇರ, ಪಂಚಾಯಿತಿ ಸದಸ್ಯ ನಿಂಗಪ್ಪ ಮೇಟಿ, ವೀರಯ್ಯ ಸಿಂದೋಗಿ, ಚಂದ್ರು ಮೇಟಿ, ಸಂತೋಷ ಕೊಂಡಲಹಳ್ಳಿ, ಮಾರುತಿ ಮೇಟಿ, ಗವಿ ಹಾಗೂ ಮುದಕಯ್ಯ ಸಸಿಮಠ ಅವರು
ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.