ADVERTISEMENT

ಕುಕನೂರು: ಯೋಧನಿಗೆ ಅದ್ಧೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 4:53 IST
Last Updated 5 ಅಕ್ಟೋಬರ್ 2021, 4:53 IST
ಕುಕನೂರು ತಾಲ್ಲೂಕಿನ ಚಿಕೇನಕೊಪ್ಪ ಗ್ರಾಮದ ಆನಂದ ಶರಣಪ್ಪ ಹಳ್ಳಿಗುಡಿ ನಿವೃತ್ತಿಯಾಗಿ ಭಾನುವಾರ ಸಂಜೆ ಗ್ರಾಮಕ್ಕೆ ಬಂದ ಅವರನ್ನು ಅವರ ತಾಯಿ ಚೆನ್ನಬಸಮ್ಮ ಭಾವುಕರಾಗಿ ಸ್ವಾಗತಿಸಿದರು
ಕುಕನೂರು ತಾಲ್ಲೂಕಿನ ಚಿಕೇನಕೊಪ್ಪ ಗ್ರಾಮದ ಆನಂದ ಶರಣಪ್ಪ ಹಳ್ಳಿಗುಡಿ ನಿವೃತ್ತಿಯಾಗಿ ಭಾನುವಾರ ಸಂಜೆ ಗ್ರಾಮಕ್ಕೆ ಬಂದ ಅವರನ್ನು ಅವರ ತಾಯಿ ಚೆನ್ನಬಸಮ್ಮ ಭಾವುಕರಾಗಿ ಸ್ವಾಗತಿಸಿದರು   

ಕುಕನೂರು: ತಾಲ್ಲೂಕಿನ ಚಿಕೇನಕೊಪ್ಪ ಗ್ರಾಮದ ಆನಂದ ಶರಣಪ್ಪ ಹಳ್ಳಿಗುಡಿ ಅವರು 21 ವರ್ಷಗಳ ಕಾಲ ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಭಾನುವಾರ ಸಂಜೆ ಗ್ರಾಮಕ್ಕೆ ಬಂದ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.

ಗ್ರಾಮದ ಜನರು ಭವ್ಯ ಸ್ವಾಗತ ಕೋರಿದರು. ಯೋಧನ ಪರ ಘೋಷಣೆ ಹಾಕಿ ಆರತಿ ಬೆಳಗಿ, ಪಟಾಕಿ ಸಿಡಿಸಿ, ಪುಷ್ಪಾರ್ಚನೆ ಮಾಡಿ ಅದ್ದೂರಿಯಾಗಿ ಸ್ವಾಗತಿಸಿದರು. ನಂತರ ತೆರೆದ ವಾಹನದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಾಗೂ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಯೋಧನನ್ನು ಸ್ವಾಗತಿಸಿ ಮೆರವ ಣಿಗೆಗೆ ಚಾಲನೆ ನೀಡಿ ಗ್ರಾಮದ ಮುಖಂಡ ವೇದಮೂರ್ತಿ ಶ್ರೀಕಾಂತಯ್ಯ ಹಿರೇಮಠ ಮಾತನಾಡಿ, ಜಾತಿ, ಮತ, ಪಂಥ ಧರ್ಮವನ್ನು ಮೀರಿ ದೇಶದ ಗಡಿಯಲ್ಲಿ ಹಗಲಿರುಳು ಸೇವೆಯನ್ನು ಸಲ್ಲಿಸಿದ ಸೈನಿಕರಿಗೆ ಸಮಾಜ ಸದಾ ಗೌರವಿಸಬೇಕು ಎಂದರು.

ADVERTISEMENT

ಕುಟುಂಬಕ್ಕಿಂತ ಈ ದೇಶ ಮುಖ್ಯ ಎಂದು ದೇಶದ ಜನತೆಗಾಗಿ ಪ್ರಾಣ ಲೆಕ್ಕಿಸದೇ ಹೋರಾಟ ಮಾಡುವ ಯೋಧರ ಕಾರ್ಯ ಸರ್ವಕಾಲಕ್ಕೂ ಶ್ಲಾಘನೀಯವಾಗಿದೆ. ಭಾರತ ದೇಶದಲ್ಲಿ ಆಸ್ತಿ, ಹಣ ಮಾಡಿದವರನ್ನು ಮೆರವಣಿಗೆ ಮಾಡೋದಿಲ್ಲ, ದೇಶ ಸೇವೆಯನ್ನು ಮಾಡಿ ಮರಳಿದ ಸೈನಿಕರಿಗೆ ಅತ್ಯದ್ಬುತ ಮೆರವಣಿಗೆ ಮಾಡಿ ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ, ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಯೋಧರ ಕಾರ್ಯ ಶ್ಲಾಘನೀಯ, ಯೋಧ ಆನಂದ ಹಳ್ಳಿಗುಡಿ ನಮ್ಮೂರಿನ ಹೆಮ್ಮೆಯ ಪುತ್ರರಾಗಿದ್ದಾರೆ ಎಂದರು.

ನಿವೃತ್ತ ಸೈನಿಕ ಆನಂದ ಹಳ್ಳಿಗುಡಿ ಮಾತನಾಡಿ, ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು. ತಾಯಿ ಭಾರತಾಂಬೆಯ ಸೇವೆ ಮಾಡಿದ್ದು ನನಗೆ ತೃಪ್ತಿ ತಂದಿದೆ. ದೇಶ ಸೇವೆಗೆ ಯುವ ಜನತೆ ಮುಂದೆ ಬರಬೇಕು, ಗ್ರಾಮದ ಅಭಿಮಾನಕ್ಕೆ ನಾನು ಸದಾ ಚಿರರುಣಿಯಾಗಿದ್ದೇನೆ ಎಂದರು.

ಮಹೇಂದ್ರ ಗದಗ, ಚಿದಾನಂದಪ್ಪ ಮ್ಯಾಗಳಮನಿ, ಲಲಿತಾ ಅಡಗಿಮನಿ, ವಿಜಯಲಕ್ಷ್ಮೀ ಮಂಗಳೂರು, ಮಹೇಶ ಗಾವರಳ, ಶ್ರೀಕಾಂತಗೌಡ ಅಂಕಲಿ, ಈಶಪ್ಪ ವಕ್ಕಳದ, ವಿರುಪಾಕ್ಷಪ್ಪ ಹಕಾರಿ, ಪ್ರಕಾಶ ಕಂಬಳಿ, ಅಶೋಕ ನಿಡಗುಂದಿ, ಸಂಗಪ್ಪ ಅಡಗಿಮನಿ, ಈರಪ್ಪ ತೆಕ್ಕಲಕೋಟಿ, ಶರಣಪ್ಪ ತುಮ್ಮರಗುದ್ದಿ, ಹನುಮರಡ್ಡಿ ವಕ್ಕಳದ, ಹನುಮಂತ ಮಂಗಳೂರು, ನೀಲಪ್ಪ ಮಾಟರಂಗಿ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.