
ಹನಮಸಾಗರ: ‘ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸುವ ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ನೀಡುವುದು ಮುಖ್ಯ’ ಎಂದು ಡಾ.ಕೇದಾರ ಗೊಂಬಿ ಹೇಳಿದರು.
ಇಲ್ಲಿನ ರೇಣುಕಾ ಕ್ಲಿನಿಕ್ ಹಾಗೂ ಮಕ್ಕಳ ಆಸ್ಪತ್ರೆ ಇಲಕಲ್ ವತಿಯಿಂದ ಆಯೋಜಿಸಿದ್ದ ಚಿಕ್ಕ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
18 ತಿಂಗಳದೊಳಗಿನ ಮಕ್ಕಳಿಗೆ ಉಚಿತ ತಪಾಸಣೆ ಮತ್ತು ವೈದ್ಯಕೀಯ ಸಲಹೆ ನೀಡಲಾಯಿತು. ನವಜಾತ ಶಿಶು ಮತ್ತು ಚಿಕ್ಕ ಮಕ್ಕಳ ತಜ್ಞ ಡಾ.ಕೇದಾರ ಗೊಂಬಿ, ಜನರಲ್ ಮತ್ತು ಫ್ಯಾಮಿಲಿ ಫಿಜಿಶಿಯನ್ ಡಾ. ಸಂತೋಷಕುಮಾರ.ಎಂ ಅವರು ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆ ತಪಾಸಣೆ ನಡೆಸಿದರು.
ಡಾ.ಸಂತೋಷಕುಮಾರ.ಎಂ ಮಾತನಾಡಿದರು. ಆಯೋಜಕರಾದ ರಾಘವೇಂದ್ರ ಬಸವಾ, ಅರುಣ್ ಬಸವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.