ADVERTISEMENT

ತಾವರಗೇರಾ: ಯುವ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 11:40 IST
Last Updated 12 ಜನವರಿ 2022, 11:40 IST
ತಾವರಗೇರಾ ಪಟ್ಟಣದಲ್ಲಿ ರಾಷ್ಟ್ರೀಯ ಯುವ ದಿನ ಆಚರಿಸಲಾಯಿತು. ಪ್ರಾಚಾರ್ಯ ಲಕ್ಷ್ಮಣಸಿಂಗ್ ವಗರನಾಳ, ಉಪನ್ಯಾಸಕರಾದ ಸಂಗಪ್ಪ ಗುಡದೂರು, ಚಂದ್ರಶೇಖರ ಹಾಗೂ ನಾಗರಾಜ ಸೇರಿ ಇತರರು ಇದ್ದರು
ತಾವರಗೇರಾ ಪಟ್ಟಣದಲ್ಲಿ ರಾಷ್ಟ್ರೀಯ ಯುವ ದಿನ ಆಚರಿಸಲಾಯಿತು. ಪ್ರಾಚಾರ್ಯ ಲಕ್ಷ್ಮಣಸಿಂಗ್ ವಗರನಾಳ, ಉಪನ್ಯಾಸಕರಾದ ಸಂಗಪ್ಪ ಗುಡದೂರು, ಚಂದ್ರಶೇಖರ ಹಾಗೂ ನಾಗರಾಜ ಸೇರಿ ಇತರರು ಇದ್ದರು   

ತಾವರಗೇರಾ: ‘ಭಾರತೀಯ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ಪ್ರಾಚಾರ್ಯ ಲಕ್ಷ್ಮಣಸಿಂಗ್ ವಗರನಾಳ ಸಲಹೆ ನೀಡಿದರು.

ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಪಟ್ಟಣದ ಸರ್.ಎಂ.ವಿಶ್ವೇಶ್ವರಯ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಮಾತನಾಡಿ,‘ವಿವೇಕಾನಂದರು ಯುವಕರಲ್ಲಿ ದೇಶಾಭಿಮಾನ ಬಿತ್ತಿದರು. ಸ್ಫೂರ್ತಿ ನೀಡಿದರು’ ಎಂದು ಹೇಳಿದರು.

ಉಪನ್ಯಾಸಕರಾದ ಸಂಗಪ್ಪ ಗುಡದೂರು, ಚಂದ್ರಶೇಖರ ಉಳ್ಕಿಹಾಳ, ಉಮಾ ಮಹೇಶ್ವರಿ, ನಾಗರಾಜ ಬಂಡಿ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.