ADVERTISEMENT

ಮಂಡ್ಯ: 'ಗೌಡರ ಗೌಡ ರಾಹುಲ್ ಗೌಡ'! - ಜನರ ಜೈಕಾರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 3:18 IST
Last Updated 8 ಅಕ್ಟೋಬರ್ 2022, 3:18 IST
ಭಾರತ್‌ ಜೋಡೊ ಯಾತ್ರೆ: ಮಂಡ್ಯದಲ್ಲಿ ಬೆಂಬಲಿಗರ ಜೊತೆ ಹೆಜ್ಜೆ ಹಾಕಿದ ರಾಹುಲ್‌ ಗಾಂಧಿ - ಪಿಟಿಐ ಚಿತ್ರ
ಭಾರತ್‌ ಜೋಡೊ ಯಾತ್ರೆ: ಮಂಡ್ಯದಲ್ಲಿ ಬೆಂಬಲಿಗರ ಜೊತೆ ಹೆಜ್ಜೆ ಹಾಕಿದ ರಾಹುಲ್‌ ಗಾಂಧಿ - ಪಿಟಿಐ ಚಿತ್ರ   

ಮಂಡ್ಯ: ರಾಜ್ಯದಲ್ಲಿ ಭಾರತ್‌ ಜೋಡೊಪಾದಯಾತ್ರೆ 6ನೇ ದಿನಶುಕ್ರವಾರವೂ ಜನಸಾಗರ ಹರಿದುಬಂತು. ನಾಗಮಂಗಲ ತಾಲ್ಲೂಕಿನ ಕೆ.ಮಲ್ಲೇನಹಳ್ಳಿಯಿಂದ ಬೆಳಿಗ್ಗೆ 6.30ಕ್ಕೆ ಪಾದಯಾತ್ರೆ ಆರಂಭಗೊಂಡಿತು. ನಾಗಮಂಗಲ ಪಟ್ಟಣ ತಲುಪಿದಾಗ ಜನರ ಜೈಕಾರ ಮುಗಿಲುಮುಟ್ಟಿತು. ‘ಗೌಡರ ಗೌಡ ರಾಹುಲ್ ಗೌಡ’ ಘೋಷಣೆ ಕೇಳಿಬಂತು.

ಅಂಗವಿಕಲರು, ದಲಿತ ಸಂಘಟನೆಗಳ ಮುಖಂಡರು ಯಾತ್ರೆಯಲ್ಲಿ ಜೊತೆಯಾದರು. ತೊಳಲಿ ಗ್ರಾಮದ ಬಳಿ ತೆಂಗಿನ ತೋಟವೊಂದಕ್ಕೆ ತೆರಳಿದ ರಾಹುಲ್‌ ಗಾಂಧಿ ಎಳನೀರು ಕುಡಿದು ವಿಶ್ರಾಂತಿ ಪಡೆದರು. ರಾತ್ರಿ ಆದಿಚುಂಚನಗಿರಿಯಲ್ಲಿ ವಾಸ್ತವ್ಯ ಹೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.