ಕೆ.ಆರ್.ಪೇಟೆ: ಪಟ್ಟಣದ ದೇವೀರ ಮ್ಮಣಿ ಕೆರೆಯಲ್ಲಿ ಗಂಗಾಪರಮೇಶ್ವರಿ ಮೀನುಗಾರಿಗೆ ಸಂಘದಿಂದ ಕೆರೆಯ ಮಧ್ಯ ಭಾಗದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಾಯಿತು.
ತಹಶೀಲ್ದಾರ್ ಎಂ.ವಿ.ರೂಪಾ ದೋಣಿಯ ಮೂಲಕ ಕೆರೆಯ ಮಧ್ಯ ಭಾಗಕ್ಕೆ ತೆರಳಿ ರಾಷ್ಟ್ರಧ್ವಜಕ್ಕೆ ನಮನ ಸಲ್ಲಿಸಿ ಮೀನುಗಾರರ ಸಂಘದ ಪದಾಧಿಕಾರಿಗಳೊಂದಿಗೆ ರಾಷ್ಟ್ರಗೀತೆ ಹಾಡಿದರು.
ಉಪ ತಹಶೀಲ್ದಾರ್ ಲಕ್ಷ್ಮೀಕಾಂತ್, ಪರಿಸರ ಎಂಜಿನಿಯರ್ ಅರ್ಚನಾ, ಪದಾ ಧಿಕಾರಿಗಳಾದ ಬಲೇರಾಮ್, ಯೋಗಿ ವಲಂಗ, ಗಿರೀಶ್, ಶಂಕರ್, ಮುಖಂಡ ಎಚ್.ಬಿ.ಮಂಜನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.