ADVERTISEMENT

ಮಂಡ್ಯ | ಹುಟ್ಟೂರು ಬೂಕನಕೆರೆಗೆ ತೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 27 ಜುಲೈ 2019, 5:25 IST
Last Updated 27 ಜುಲೈ 2019, 5:25 IST
   

ಮಂಡ್ಯ:ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್‌.ಯಡಿಯೂರಪ್ಪ ಅವರು, ತಮ್ಮ ಹುಟ್ಟೂರು ಕೆ.ಆರ್‌.ಪೇಟೆ ತಾಲ್ಲೂಕಿನ ಬೂಕನಕೆರೆಗೆ ತೆರಳಲು ಶನಿವಾರ ಬೆಳಿಗ್ಗೆ ತೂಬಿನಕೆರೆ ಹೆಲಿಪ್ಯಾಡ್‌ಗೆ ಬಂದಿಳಿದರು.

11.30ಕ್ಕೆ ಬೂಕನಕೆರೆಗೆ ಭೇಟಿ ನೀಡಿ, ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸುವರು.

ಸ್ವಾಗತಕ್ಕೆ ಗ್ರಾಮ ಸಜ್ಜು

ADVERTISEMENT

ಊರ ಮಗ ಯಡಿಯೂರಪ್ಪ ಸ್ವಾಗತಕ್ಕೆ ಬೂಕನಕೆರೆ ಸಜ್ಜುಗೊಂಡಿದ್ದು, ಗ್ರಾಮದೇವತೆ ಗೋಗಾಲಮ್ಮ ದೇವಾಲಯದ ಮುಂದೆ ಜನ ಸೇರಿದ್ದಾರೆ.

ಯಡಿಯೂರಪ್ಪ ಅವರ ಸ್ವಾಗತಕ್ಕೆ ಗ್ರಾಮದ ದೇಗುಲದ ಮುಂದೆ ಜನ ಸೇರಿದ್ದಾರೆ.

ಮಧ್ಯಾಹ್ನ 1ಕ್ಕೆ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದರ್ಶನ ಪಡೆಯಲಿದ್ದಾರೆ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.