ಮಂಡ್ಯ: ‘ಆಪರೇಷನ್ ಸಿಂಧೂರ’ ಮೂಲಕ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿ ಯಶಸ್ವಿಯಾಗಿ ಸೇನಾ ಕಾರ್ಯಾಚರಣೆ ಮಾಡಿರುವ ಸೈನಿಕರಿಗೆ ಮತ್ತಷ್ಟು ಶಕ್ತಿ ತುಂಬಲಿ ಎಂದು ಹಿಂದೂ ಹಿತರಕ್ಷಣಾ ಸಮಿತಿಯ ಕಾರ್ಯಕರ್ತರು ನಗರದ ಶನೇಶ್ವರ ದೇವಾಲಯದಲ್ಲಿ ಮಹಾ ಮೃತ್ಯುಂಜಯ ಹೋಮ ಮಾಡಿಸಿದರು.
ನಮ್ಮ ಭಾರತೀಯ ಯೋಧರಿಗೆ ತೊಂದರೆ ಆಗದಂತೆ ಕಾಪಾಡುವಂತೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಆವರಣದಲ್ಲಿ ಅಗ್ನಿಕುಂಡವನ್ನು ಇಟ್ಟು ವಿಶೇಷವಾಗಿ ಅಲಂಕರಿಸಿ, ಗಣಪತಿ ಪೂಜೆ, ಪುಣ್ಯಾಹಾ, ನವಗ್ರಹಶಾಂತಿ, ಗಣಪತಿ ಹೋಮ, ಮೃತ್ಯುಂಜಯ ಪೂಜೆ ಮತ್ತು ಹೋಮವನ್ನು ಶಾಸ್ತ್ರೋಕ್ತವಾಗಿ ನಡೆಸಲಾಯಿತು.
ವೈರಿ ರಾಷ್ಟ್ರ ಪಾಕಿಸ್ತಾನದ ಸೈನಿಕರಿಂದ ಭಾರತದ ಯೋಧಕರಿಗೆ ಯಾವುದೇ ರೀತಿಯಲ್ಲೂ ಹಾನಿಯಾಗಬಾರದು, ಎಲ್ಲ ರೀತಿಯಲೂ ನಮ್ಮ ಸೈನಿಕರಿಗೆ ದೈವಬಲ ಸಿಗಬೇಕೆಂದು ಪ್ರಾರ್ಥನೆ ಸಲ್ಲಿಸಲಾಯಿತು. ಶನೀಶ್ಚರ ದೇವಾಲಯದ ಪ್ರಧಾನ ಅರ್ಚಕ ನವೀನ್ ಧೀಕ್ಷಿತ್ ನೇತೃತ್ವದ ಋತ್ವಿಕರ ತಂಡ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಸಮಿತಿಯ ನಟರಾಜು, ಮಂಟೇಸ್ವಾಮಿ ಹಾಗೂ ಸೈನಿಕರ ಕುಟುಂಬದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.