ADVERTISEMENT

ಮಂಡ್ಯ | ವಕ್ಫ್‌ ಹೆಸರು: ಪಹಣಿ ಸುಟ್ಟು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 18:14 IST
Last Updated 11 ಜನವರಿ 2025, 18:14 IST
ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು, ವಕ್ಫ್‌ ಎಂದು ನಮೂದಾಗಿರುವ ಕೃಷಿ ಜಮೀನುಗಳ ಪಹಣಿಗಳನ್ನು ಸುಟ್ಟು ಶನಿವಾರ ಪ್ರತಿಭಟನೆ ನಡೆಸಿದರು
ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು, ವಕ್ಫ್‌ ಎಂದು ನಮೂದಾಗಿರುವ ಕೃಷಿ ಜಮೀನುಗಳ ಪಹಣಿಗಳನ್ನು ಸುಟ್ಟು ಶನಿವಾರ ಪ್ರತಿಭಟನೆ ನಡೆಸಿದರು   

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ವಕ್ಫ್‌ ಎಂದು ನಮೂದಾಗಿರುವ 20ಕ್ಕೂ ಹೆಚ್ಚು ಪಹಣಿಗಳನ್ನು ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಕುವೆಂಪು ವೃತ್ತದಲ್ಲಿ, ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟಿಸಿ, ವಕ್ಫ್‌ ಮಂಡಳಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

‘ಇನ್ನೊಂದು ತಿಂಗಳಲ್ಲಿ ಪಹಣಿಗಳಲ್ಲಿ ಬರುತ್ತಿರುವ ವಕ್ಫ್‌ ಹೆಸರು ತೆಗೆಯದಿದ್ದರೆ ರೈತರ ಜತೆಗೂಡಿ ಆಮರಣಾಂತ ಉಪವಾಸ ಕೂರುತ್ತೇವೆ’ ಎಂದು ವೇದಿಕೆಯ ಅಧ್ಯಕ್ಷ ಬಿ. ಶಂಕರಬಾಬು ಎಚ್ಚರಿಸಿದರು.

ADVERTISEMENT

20ರಂದು ಶ್ರೀರಂಗಪಟ್ಟಣ ಬಂದ್‌:

ಸಮಸ್ಯೆ ಪರಿಹಾರಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ಹೇರುವ ಸಲುವಾಗಿ ಜ.20ರಂದು ಶ್ರೀರಂಗ‍ಟ್ಟಣ ಬಂದ್‌ ಮಾಡಲು ವಿವಿಧ ಸಂಘಟನೆಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.