ADVERTISEMENT

ಶ್ರೀರಂಗಪ‍ಟ್ಟಣ: ಹಿಂದುತ್ವ ಪರ ಸಂಘಟನೆಗಳಿಂದ ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:31 IST
Last Updated 11 ಫೆಬ್ರುವರಿ 2026, 7:31 IST
ಶ್ರೀರಂಗಪಟ್ಟಣದಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ಆರ್‌ಎಸ್‌ಎಸ್‌ ಸಂಘಟನೆ ಸ್ಥಾಪನೆಯ ಶತಾಬ್ದಿ ನಿಮಿತ್ತ ಮಂಗಳವಾರ ಶೋಭಾಯಾತ್ರೆ ನಡೆಸಿದರು
ಶ್ರೀರಂಗಪಟ್ಟಣದಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ಆರ್‌ಎಸ್‌ಎಸ್‌ ಸಂಘಟನೆ ಸ್ಥಾಪನೆಯ ಶತಾಬ್ದಿ ನಿಮಿತ್ತ ಮಂಗಳವಾರ ಶೋಭಾಯಾತ್ರೆ ನಡೆಸಿದರು   

ಶ್ರೀರಂಗಪ‍ಟ್ಟಣ: ಆರ್‌ಎಸ್‌ಎಸ್‌ ಸಂಘಟನೆ ಸ್ಥಾಪನೆಯ ಶತಾಬ್ದಿ ನಿಮಿತ್ತ ಪಟ್ಟಣದಲ್ಲಿ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಶೋಭಾಯಾತ್ರೆ ನಡೆಸಿದರು.

ಇಲ್ಲಿನ ಬೆಂಗಳೂರು– ಮೈಸೂರು ಹೆದ್ದಾರಿ ವೃತ್ತದಿಂದ ಶ್ರೀರಂಗನಾಥಸ್ವಾಮಿ ದೇವಾಲಯದ ವರೆಗೆ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ಜೈ ಶ್ರೀರಾಂ, ಜೈ ಭಜರಂಗಿ, ಜೈ ಶಿವಾಜಿ ಮಹಾರಾಜ್‌, ಜೈ ಆರ್‌ಎಸ್‌ಎಸ್‌ ಘೋಷಣೆಗಳು ಮೊಳಗಿದವು. ಮೆರವಣಿಗೆಯಲ್ಲಿ ದೇಸಿ ತಳಿಯ ಎತ್ತುಗಳು ಹಾಗೂ ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು. ಮಹಿಳೆಯರು ಕಳಶ ಹೊತ್ತು ಸಾಗಿದರು.

ಶ್ರೀರಂಗನಾಥ ಕಲ್ಯಾಣ ಮಂಟಪದ ಬಳಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ದೇವಸ್ಥಾನಗಳ ಸಂವರ್ಧನಾ ಸಮಿತಿ ಕರ್ನಾಟಕ ಘಟಕದ ಸಂಯೋಜಕ ಮನೋಹರ ಮಠದ್, ‘ರಾಜ್ಯ ಸರ್ಕಾರ ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಕಾಣುತ್ತಿದೆ. ಸಮಾಜ ಘಾತುಕ ಶಕ್ತಿಗಳ ಪರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ’ ಎಂದು ಟೀಕಿಸಿದರು.

ADVERTISEMENT

ಬಾಳೆಹೊನ್ನೂರು ಮಠದ ತೆಂಡೇಕೆರೆ ಶಾಖೆಯ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೋತಿಷಿ ವಿ. ಭಾನುಪ್ರಕಾಶ್ ಶರ್ಮಾ, ಬಿಜೆಪಿ ಮಂಡಲದ ಅಧ್ಯಕ್ಷ ಪೀಹಳ್ಳಿ ಎಸ್‌. ರಮೇಶ್, ನಗರ ಘಟಕದ ಅಧ್ಯಕ್ಷ ಜಿ.ಇ. ಸುಧಾಕರ್‌, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಎಸ್‌. ಸಿದ್ದರಾಮಯ್ಯ, ಟಿ. ಶ್ರೀಧರ್‌, ಕೆ. ಚಂದನ್‌, ಟಿ. ಬಾಲರಾಜು, ಎಸ್‌. ಪ್ರಕಾಶ್, ಗಂಜಾಂ ಶಿವು, ರಂಗನಾಥ್, ಹೇಮಂತ್, ಕಿರಣ್‌, ಬಲ್ಲೇನಹಳ್ಳಿ ಕೃಷ್ಣೇಗೌಡ, ಪುಟ್ಟರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.