ADVERTISEMENT

ಯಶ್‌ ಮಾತಿಗೆ ಆಕ್ಷೇಪ: ಎಳೆದಾಡಿದ ಅಭಿಮಾನಿಗಳು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 17:07 IST
Last Updated 10 ಏಪ್ರಿಲ್ 2019, 17:07 IST
ಸುಮಲತಾ ಬೆಂಬಲಿಗರು ಜೆಡಿಎಸ್‌ ಬೆಂಬಲಿಗನ ಜೊತೆ ವಾಗ್ವಾದ ನಡೆಸಿದರು
ಸುಮಲತಾ ಬೆಂಬಲಿಗರು ಜೆಡಿಎಸ್‌ ಬೆಂಬಲಿಗನ ಜೊತೆ ವಾಗ್ವಾದ ನಡೆಸಿದರು   

ಮಂಡ್ಯ: ಮದ್ದೂರು ತಾಲ್ಲೂಕು ಚಂದೂಪುರ ಗ್ರಾಮದಲ್ಲಿ ಬುಧವಾರ ಚಿತ್ರನಟ ಯಶ್‌ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬರನ್ನು ಅವರ ಅಭಿಮಾನಿಗಳು, ಸುಮಲತಾ ಬೆಂಬಲಿಗರು ಹಿಡಿದು ಎಳೆದಾಡಿ ನಿಂದಿಸಿದರು.

ಕೆ.ಹೊನ್ನಲಗೆರೆ ಮಾರ್ಗವಾಗಿ ವಿವಿಧ ಹಳ್ಳಿಗಳಲ್ಲಿ ಯಶ್‌ ಪ್ರಚಾರ ನಡೆಸಿ ಚಂದೂಪುರಕ್ಕೆ ಬಂದರು. ಗ್ರಾಮದ ವೃತ್ತದಲ್ಲಿ ಪಟಾಕಿ ಸಿಡಿಸಿ ಸ್ವಾಗತ ಕೋರಲಾಯಿತು. ಸುಮಲತಾ ಪರ ಭಾರಿ ಸಂಖ್ಯೆಯ ಬೆಂಬಲಿಗರು ಸೇರಿದದ್ದರು. ಯಶ್‌ ಭಾಷಣ ಆರಂಭಿಸುತ್ತಿದ್ದಂತೆ ಸಚಿವ ಡಿ.ಸಿ.ತಮ್ಮಣ್ಣ ಬೆಂಬಲಿಗ, ಕೆ.ಹಾಗಲಹಳ್ಳಿ ಗ್ರಾಮದ ಸ್ವಾಮಿ ‘ದೇವೇಗೌಡರ ಕುಟುಂಬ ಕುರಿತು ಏನನ್ನೂ ಮಾತನಾಡಬೇಡಿ’ ಎಂದು ಕೂಗಿದರು.

ಇದರಿಂದ ಕುಪಿತಗೊಂಡ ಸುಮಲತಾ ಬೆಂಬಲಿಗರು, ಸ್ವಾಮಿ ಅವರನ್ನು ಸ್ಥಳದಿಂದ ದೂರಕ್ಕೆ ಎಳೆದೊಯ್ದು ಜೋರು ಧ್ವನಿಯಲ್ಲಿ ನಿಂದಿಸಿದರು. ‘ದೇವೇಗೌಡರ ಕುಟುಂಬ ರಾಜಕಾರಣ ನೋಡಿ ಸಾಕಾಗಿದೆ. ಅವರ ಮನೆಯಿಂದ ಹಣ ತಂದು ಅಭಿವೃದ್ಧಿ ಮಾಡಿಲ್ಲ. ಕಬ್ಬಿನ ಬಾಕಿ ಹಣ ಕೊಡಿಸಲು ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ಆಗಿಲ್ಲ’ ಎಂದು ಟೀಕಿಸಿದರು.

ADVERTISEMENT

ಎಚ್‌.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಡಿ.ಸಿ.ತಮ್ಮಣ್ಣ ಹಾಗೂ ಜೆಡಿಎಸ್‌ ಪಕ್ಷಕ್ಕೆ ಧಿಕ್ಕಾರ ಕೂಗಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.