ADVERTISEMENT

ನಂಜನಗೂಡು: ರಸ್ತೆ ರಿಪೇರಿ ಕಾರ್ಯ ನಡೆಸಿದ ಉದ್ಯಮಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 15:16 IST
Last Updated 17 ಸೆಪ್ಟೆಂಬರ್ 2024, 15:16 IST
ನಂಜನಗೂಡಿನ ಹುಲ್ಲಹಳ್ಳಿ – ನಂಜನಗೂಡು ಹೆದ್ದಾರಿಯಲ್ಲಿ ಹಳ್ಳ ಬಿದ್ದು ಹಾಳಾಗಿದ್ದು, ಉದ್ಯಮಿ ನಂದಕುಮಾರ್ ಸೋಮವಾರ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಸಿದರು.
ನಂಜನಗೂಡಿನ ಹುಲ್ಲಹಳ್ಳಿ – ನಂಜನಗೂಡು ಹೆದ್ದಾರಿಯಲ್ಲಿ ಹಳ್ಳ ಬಿದ್ದು ಹಾಳಾಗಿದ್ದು, ಉದ್ಯಮಿ ನಂದಕುಮಾರ್ ಸೋಮವಾರ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಸಿದರು.   

ನಂಜನಗೂಡು: ನಂಜನಗೂಡು -ಹುಲ್ಲಹಳ್ಳಿ ಹೆದ್ದಾರಿಯಲ್ಲಿ ಹಳ್ಳ ಬಿದ್ದಿದ್ದು, ಕಾಂಗ್ರೆಸ್‌ ಮುಖಂಡ ‌ಉದ್ಯಮಿ ನಂದಕುಮಾರ್‌ ಸೋಮವಾರ  ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ನಡೆಸಿದರು.

ರಸ್ತೆಯಲ್ಲಿ ಹಾದುಹೋಗಿರುವ ನಗರಕ್ಕೆ ನೀರು ಸರಬರಾಜು ಮಾಡುವ ನೀರಿನ ಪೈಪ್ ಲೈನ್ ಒಡೆದು, ರಸ್ತೆ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ರಸ್ತೆಯ ಅರ್ಧ ಭಾಗವನ್ನು ಬ್ಯಾರಿಕೇಡ್‌ ಅಳವಡಿಸಿ ಮುಚ್ಚಲಾಗಿತ್ತು. ಸಾರ್ವಜನಿಕರು ಹಲವು  ಬಾರಿ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸ್ಪಂದಿಸಿರಲಿಲ್ಲ. 

ಉದ್ಯಮಿ ನಂದಕುಮಾರ್‌ ಜೆಸಿಬಿ ಹಾಗೂ ರೋಡ್ ರೋಲರ್ ಯಂತ್ರ ಬಳಸಿ ರಸ್ತೆಯನ್ನು ದುರಸ್ತಿ ಮಾಡಿಸಿ ಸುಗಮ ವಾಹನ ಸಂಚಾರಕ್ಕೆ ನೆರವಾಗಿದ್ದಾರೆ. ನಗರದ ನಾಗರೀಕರು ಅವರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT
ನಂಜನಗೂಡಿನ ಹುಲ್ಲಹಳ್ಳಿ – ನಂಜನಗೂಡು ಹೆದ್ದಾರಿಯಲ್ಲಿ ಹಳ್ಳ ಬಿದ್ದು ಹಾಳಾಗಿದ್ದ ರಸ್ತೆಯನ್ನು ನಗರದ ಉದ್ಯಮಿ ನಂದಕುಮಾರ್ ಸೋಮವಾರ ತನ್ನ ಸ್ವಂತ ಖರ್ಚಿನಲ್ಲಿ ರಸ್ತೆ ರಿಪೇರಿ ಕಾರ್ಯ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.