ADVERTISEMENT

ದರ್ಶನ್ ಬೈಯ್ದಿದ್ದು ನಿಜ, ಹಲ್ಲೆ ನಡೆಸಿಲ್ಲ: ಸಂದೇಶ್ ನಾಗರಾಜ್ ಪುತ್ರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 10:15 IST
Last Updated 15 ಜುಲೈ 2021, 10:15 IST
ದರ್ಶನ್
ದರ್ಶನ್    

ಮೈಸೂರು: ‘ಲಾಕ್‌ಡೌನ್‌ಗೆ 4 ದಿನಗಳ ಮುಂಚೆ ನಟ ದರ್ಶನ್ ಅವರು ನಮ್ಮ ಹೋಟೆಲ್ಲಿನ ಕಾರ್ಮಿಕರೊಬ್ಬರಿಗೆ ಬೈಯ್ದಿದ್ದು ನಿಜ. ಆದರೆ, ಅವರು ಹಲ್ಲೆ ನಡೆಸಿಲ್ಲ’ ಎಂದು ‘ಸಂದೇಶ್‌ ದ ಪ್ರಿನ್ಸ್‌’ ಹೋಟೆಲ್‌ ಮಾಲೀಕ ಸಂದೇಶ್‌ ನಾಗರಾಜ್ ಅವರ ಪುತ್ರ ಸಂದೇಶ್‌ ತಿಳಿಸಿದರು.

‘ರಾತ್ರಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ದರ್ಶನ್ ಬೈಯ್ಯುತ್ತಾರೆ. ಮಹಾರಾಷ್ಟ್ರ ಮೂಲದ ಕಾರ್ಮಿಕರೊಬ್ಬರಿಗೆ ಕನ್ನಡ ಬರುತ್ತಿರಲಿಲ್ಲ. ಬಹುಶಃ ಇದು ಗೊಂದಲಕ್ಕೆ ಎಡೆ ಮಾಡಿರಬಹುದು. ಆದರೆ, ಹಲ್ಲೆ ನಡೆದಿಲ್ಲ. ಒಂದು ವೇಳೆ ಹಲ್ಲೆ ನಡೆದಿದ್ದರೆ ನಾನೇ ಪೊಲೀಸರಿಗೆ ದೂರು ನೀಡುತ್ತಿದ್ದೆ. ಬಳಿಕ ಕಾರ್ಮಿಕನ ಬಳಿ ಕ್ಷಮೆ ಕೇಳಿದ್ದೇನೆ’ ಎಂದು ಹೇಳಿದರು.

‘ನಮ್ಮ ಹೋಟೆಲ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳು 10 ದಿನಗಳ ನಂತರ ತಾನೇ ತಾನಾಗಿ ಡಿಲಿಟ್‌ ಆಗುತ್ತವೆ. ಘಟನೆ ಕುರಿತು ಇಂದ್ರಜಿತ್ ಲಂಕೇಶ್‌ 15 ದಿನಗಳ ಹಿಂದೆ ನನ್ನನ್ನು ಪ್ರಶ್ನಿಸಿದ್ದರು’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.