ADVERTISEMENT

ದಸರಾ ಆನೆ ಬಲರಾಮನ ಅಂತ್ಯ ಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 8 ಮೇ 2023, 14:32 IST
Last Updated 8 ಮೇ 2023, 14:32 IST
ನಾಗರಹೊಳೆ ಹುಣಸೂರು ವಲಯದ ಕಾರೆಕಟ್ಟೆ ಅರಣ್ಯದಲ್ಲಿ ಬಲರಾಮನ ಅಂತ್ಯ ಸಂಸ್ಕಾರ ಸರ್ಕಾರಿ ಗೌರವ ಮತ್ತು ವಿಧಿ ವಿಧಾನದೊಂದಿಗೆ ನೆರವೇರಿತು
ನಾಗರಹೊಳೆ ಹುಣಸೂರು ವಲಯದ ಕಾರೆಕಟ್ಟೆ ಅರಣ್ಯದಲ್ಲಿ ಬಲರಾಮನ ಅಂತ್ಯ ಸಂಸ್ಕಾರ ಸರ್ಕಾರಿ ಗೌರವ ಮತ್ತು ವಿಧಿ ವಿಧಾನದೊಂದಿಗೆ ನೆರವೇರಿತು   

ಹುಣಸೂರು: ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಹೆಗ್ಗಳಿಕೆಯ ‘ಬಲರಾಮ’ ಆನೆ (65) ಅಂತ್ಯ ಸಂಸ್ಕಾರ ಸೋಮವಾರ ನಾಗರಹೊಳೆ ಸಂರಕ್ಷಿತ ಅರಣ್ಯ ಪ್ರದೇಶ ಕಾರೆಕಟ್ಟೆಯಲ್ಲಿ ಅರಮನೆ ಪುರೋಹಿತರ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.

ಕಳೆದ ಕೆಲವು ದಿನಗಳಿಂದ ಬಲರಾಮ ಆನೆ ಅನಾರೋಗ್ಯದಿಂದ ಬಳಲುತ್ತಿದ್ದು, ಇಲಾಖೆ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದ್ದರು. ಚಿಕ್ಸಿತೆ ಸ್ಪಂದಿಸದೆ ಭಾನುವಾರ ಆನೆ ಮೃತಪಟ್ಟಿತು.

ಇಲಾಖೆಯ ಅಧಿಕಾರಿಗಳು ಮತ್ತು ಮೈಸೂರು ಅರಮನೆಯ ಪ್ರತಿನಿಧಿಯಾಗಿ ರಾಜಮನೆತನದ ಶೃತಿಕೀರ್ತಿ ದೇವಿ ಅರಸು ಇದ್ದರು ಎಂದು ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ಹರ್ಷ ಕುಮಾರ್ ಚಿಕ್ಕನರಗುಂದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.