ADVERTISEMENT

ಆಹಾರ ಅರಸಿ ಬಂದಿದ್ದ ಹೆಣ್ಣಾನೆ ವಿದ್ಯುತ್ ತಂತಿ ಸ್ಪರ್ಶಿಸಿ ಸಾವು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 20:20 IST
Last Updated 7 ಫೆಬ್ರುವರಿ 2026, 20:20 IST
ವಿದ್ಯುತ್ ತಂತಿ ಸ್ಪರ್ಶದಿಂದ ಮೃತಪಟ್ಟ ಹೆಣ್ಣಾನೆ 
ವಿದ್ಯುತ್ ತಂತಿ ಸ್ಪರ್ಶದಿಂದ ಮೃತಪಟ್ಟ ಹೆಣ್ಣಾನೆ    

ಪಿರಿಯಾಪಟ್ಟಣ (ಮೈಸೂರು ಜಿಲ್ಲೆ): ತಾಲ್ಲೂಕಿನ ದೊಡ್ಡ ಹರವೆಯಲ್ಲಿ ಆಹಾರ ಅರಸಿ ಬಂದಿದ್ದ 15 ವರ್ಷದ ಹೆಣ್ಣಾನೆ, ಜಮೀನಿಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ  ಶುಕ್ರವಾರ ರಾತ್ರಿ ಮೃತಪಟ್ಟಿದೆ. 

ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲಿಸಿದರು. ಜಮೀನು ಮಾಲೀಕ ಬೈಲುಕುಪ್ಪೆ ಮಖ್ತರ್‌, ಜಮೀನು ಗುತ್ತಿಗೆಗೆ ಪಡೆದಿದ್ದ ದೊಡ್ಡಹರವೆ ಗ್ರಾಮದ ಶಿವಣ್ಣ ವಿರುದ್ಧ ಬೈಲಕುಪ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT