ಮೈಸೂರು: ವರುಣಾ ಸಮೀಪದ ಕುಪ್ಪೇಗಾಲದಲ್ಲಿ 6 ತಿಂಗಳ ಹಿಂದೆ ಕಾಣೆಯಾಗಿದ್ದ ಮಾದಯ್ಯ (55) ಎಂಬುವವರು ಕೊಲೆಯಾಗಿರುವ ಸಂಗತಿ ಇದೀಗ ಗೊತ್ತಾಗಿದ್ದು, ಆರೋಪಿಯ ವಿಚಾರಣೆಗೆ ವರುಣಾ ಠಾಣೆ ಪೊಲೀಸರು ಮುಂದಾಗಿದ್ದಾರೆ.
ನಂಜನಗೂಡಿನ ಕೊಲೆ ಪ್ರಕರಣ ವೊಂದರಲ್ಲಿ ಸೆರೆ ಸಿಕ್ಕ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆತ ಮಾದಯ್ಯ ಅವರನ್ನು ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ. ರಾತ್ರಿ ವೇಳೆ ಜೂಜಾಟವಾಡುತ್ತಿದ್ದಾಗ ಮಾದಯ್ಯ ಅವರು ಆರೋಪಿಗೆ ಜೂಜಾಟವಾಡಬಾರದು ಎಂದು ಬುದ್ದಿ ಹೇಳಿದ್ದಾರೆ.
ಇದರಿಂದ ಕೋಪಗೊಂಡ ಆತ ಹೊಡೆದು ಕೊಲೆ ಮಾಡಿ, ಕಪಿಲಾ ನದಿಗೆ ಶವವನ್ನು ಎಸೆದಿದ್ದ. ತಿ.ನರಸೀಪುರದ ನದಿಯಲ್ಲಿ ಗುರುತು ಹಿಡಿಯಲಾರದ ಸ್ಥಿತಿಯಲ್ಲಿ ದೊರೆತ ಇವರ ಶವವನ್ನು ಅಲ್ಲಿನ ಪೊಲೀಸರೆ ಅಂತ್ಯಸಂಸ್ಕಾರ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.