ADVERTISEMENT

ನನಗಿನ್ನೂ ನಿವಾಸ ನೀಡಿಲ್ಲ: ಜಿ.ಟಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 24 ಜುಲೈ 2018, 10:16 IST
Last Updated 24 ಜುಲೈ 2018, 10:16 IST

ಮೈಸೂರು: ‘ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ನನಗಿನ್ನೂ ನಿವಾಸ ನೀಡಿಲ್ಲ. ನನಗೆ ನಿವಾಸ ನೀಡಿದ ದಿನವೇ ವಾಸ ಆರಂಭಿಸುವೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

‘ಆಷಾಢ ಶುಕ್ರವಾರ, ಅಮಾವಾಸ್ಯೆ ಎಂದೆಲ್ಲಾ ದಿನ ನೋಡಿ ವಾಸ ಆರಂಭಿಸುವ ಅಗತ್ಯ ನನಗಿಲ್ಲ. ನನಗೆ ಎಲ್ಲ ದಿನಗಳೂ ಒಂದೇ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ದಿನ ನೋಡಿ ಗೃಹ ಪ್ರವೇಶ ಮಾಡುವವರು ಯಾರೋ ನನಗೆ ಗೊತ್ತಿಲ್ಲ. ಅದು ಅವರವರ ನಂಬಿಕೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.