ರಾಯಚೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ದೇವೇಗೌಡ ಅವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಜಿಲ್ಲಾ ಜೆಡಿಎಸ್ ವತಿಯಿಂದ ಸರ್ವಧರ್ಮ ಪ್ರಾರ್ಥನೆ ಮಾಡಲಾಯಿತು.
ಜಿಲ್ಲಾ ಕ್ರೀಡಾಂಗಣ ಪಕ್ಕದಲ್ಲಿರುವ ಮಹಾತ್ಮ ಗಾಂಧೀಜಿ ಪುತ್ಥಳಿ ಹತ್ತಿರ ಪ್ರಾರ್ಥನೆ ಆಯೋಜಿಸಲಾಗಿತ್ತು. ಹಿಂದೂ, ಕ್ರೈಸ್ತ, ಮುಸ್ಲಿಂ ಹಾಗೂ ಜೈನ್ ಧರ್ಮದ ಗುರುಗಳಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ವಿರೂಪಾಕ್ಷಿ ಮಾತನಾಡಿ, ‘ನಮ್ಮ ನಾಯಕರಾದ ಮಾಜಿ ಪ್ರಧಾನಿ ದೇವೇಗೌಡ ದಂಪತಿ ಬೇಗನೆ ಗುಣಮುಖ ಹೊಂದಲಿ ಎಂದು ಪಕ್ಷದ ಪ್ರಾರ್ಥನೆ ಮಾಡಲಾಗಿದೆ. ಅವರು ಮತ್ತೆ ಆರೋಗ್ಯ ಹೊಂದಿ ಪಕ್ಷದ ಸಂಘಟನೆಯಯಲ್ಲಿ ತೊಡಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗಿದೆ’ ಎಂದರು.
ಮುಖಂಡರ ಮಹಾಂತೇಶ ಪಾಟೀಲ, ಯೂಫಸ್ ಖಾನ್, ಎನ್. ಶಿವಶಂಕರ, ತಿಮ್ಮಾರೆಡ್ಡಿ, ಅಜಿತ ಸೇಠ, ರಾಮಕೃಷ್ಣ, ಆದಿರಾಜ, ವಿಶ್ವನಾಥ ಪಟ್ಟಿ, ನರಸಪ್ಪ ಆಶಾಪೂರ, ಅಮ್ಜದ, ಬಬ್ಲು, ಯಮಿನಿ, ಮಹೇಶ,ವೆಂಕಟೇಶ,ಕುಮಾರಸ್ವಾಮಿ, ಪಾರ್ಥ, ಈರಣ್ಣ ಯಾದವ, ನರಸಿಂಹಲು ಇದ್ದರು.
ಇದನ್ನೂ ಓದಿ... ಎಚ್.ಡಿ.ದೇವೇಗೌಡ ದಂಪತಿಗೆ ಕೋವಿಡ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.