ADVERTISEMENT

ಬೆಳೆಹಾನಿಯಿಂದ ನೊಂದ ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 6:54 IST
Last Updated 22 ನವೆಂಬರ್ 2021, 6:54 IST
   

ಮುದಗಲ್ (ರಾಯಚೂರು): ಮುದಗಲ್ ಸಮೀಪದ ಭೋಗಾಪುರ ಗ್ರಾಮದ ರೈತ ನಿರಂತರ ಮಳೆಯಿಂದ ಬೆಳೆಹಾನಿಯಾಗಿದ್ದಕ್ಕೆ ನೊಂದು ಜಮೀನಿನಲ್ಲೇ ನೇಣುಬಿಗಿದುಕೊಂಡು ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವೀರನಗೌಡ ಶೇಖರಗೌಡ(50) ಆತ್ಮಹತ್ಯೆಗೆ ಶರಣಾದ ರೈತ. ಎಂಟು ಎಕರೆ ಜಮೀನಿನಲ್ಲಿ ತೊಗರಿ ಹಾಗೂ ಭತ್ತ ಬೆಳೆದಿರುವುದು ಹಾಳಾಗಿದೆ. ಮೃತ ರೈತನಿಗೆ ಪತ್ನಿ, ಒಬ್ಬರು ಪುತ್ರ ಹಾಗೂ ಒಬ್ಬರು ಪುತ್ರಿ ಇದ್ದಾರೆ.

ಮುದಗಲ್ ಪೊಲೀಸ್ ಠಾಣೆಯಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.