ADVERTISEMENT

27ರಂದು ಕೆಎಸ್‌ಸಿಎ ಕ್ರಿಕೆಟ್‌ ಆಯ್ಕೆ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 13:42 IST
Last Updated 24 ನವೆಂಬರ್ 2022, 13:42 IST

ರಾಯಚೂರು: ಮಂತ್ರಾಲಯ ಮಾರ್ಗದಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಒಕ್ಕೂಟ (ಕೆಎಸ್‌ಸಿಎ) ರಾಯಚೂರು ವಲಯದ ಮೈದಾನದಲ್ಲಿ14 ವರ್ಷದೊಳಗಿನವರ ಕ್ರಿಕೆಟ್‌ ಆಯ್ಕೆ ಪ್ರಕ್ರಿಯೆಯು ಇದೇ ನವೆಂಬರ್‌ 27 ರಂದು ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ ಎಂದು ವಲಯದ ಸಂಚಾಲಕ ಸುಜಿತ್‌ ಬೊಹರಾ ತಿಳಿಸಿದ್ದಾರೆ.

ಕ್ಲಬ್‌ಗಳಿಗೆ, ಶಾಲೆಗಳಿಗೆ ಸೇರಿದಂತೆ 14 ವರ್ಷದೊಳಗಿನ ಎಲ್ಲರಿಗೂ ಮುಕ್ತವಾಗಿರುತ್ತದೆ. ಭಾವಗವಹಿಸುವವರು 1ನೇ ಸೆಪ್ಟೆಂಬರ್‌ 2008 ರಂದು ಅಥವಾ ನಂತರದಲ್ಲಿ ಜನಿಸಿದವರಿರಬೇಕು. ಸಕ್ಷಮ ಪ್ರಾಧಿಕಾರದಿಂದ ಪಡೆದ ಜನ್ಮ ದಿನಾಂಕವಿರುವ ಪ್ರಮಾಣಪತ್ರ ಮತ್ತು ಆಧಾರ್‌ ಕಾರ್ಡ್‌ ತರಬೇಕು. ಬಿಳಿ ಕ್ರಿಕೆಟ್‌ ಉಡುಗೆ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ 78920 63470 (ಜಿಲ್ಲಾ ಸಂಯೋಜಕ ಶರಣರೆಡ್ಡಿ) ಮತ್ತು 82176 41006 (ವ್ಯವಸ್ಥಾಪಕ ಕೆ.ಭೀಮಾಚಾರ್ಯ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT