ರಾಯಚೂರು: ನಿತ್ಯ ಜನಜಂಗುಳಿ, ಬಸ್ ಓಡಾಟದಿಂದ ಕೂಡಿರುತ್ತಿದ್ದ ಕೇಂದ್ರ ಬಸ್ ನಿಲ್ದಾಣವು ಬಿಕೋ ಎನ್ನುತ್ತಿದೆ. ಜಿಲ್ಲೆಯ ಎಲ್ಲ ಏಳು ಡಿಪೋಗಳಲ್ಲಿಯೂ ಇದೇ ಸ್ಥಿತಿ ಇದೆ. ಚಾಲಕರು ಮತ್ತು ನಿರ್ವಾಹಕರು ಬಸ್ ನಿಲ್ದಾಣದತ್ತ ಸುಳಿಯುತ್ತಿಲ್ಲ.
ರಾಯಚೂರು ಬಸ್ ನಿಲ್ದಾಣದ ಮುಂಭಾಗ ಕ್ರೂಸರ್, ಜೀಪ್ ಹಾಗೂ ಆಟೋಗಳಲ್ಲಿ ಪ್ರಯಾಣಿಕರು ವಿವಿಧೆಡೆ ತೆರಳುತ್ತಿದ್ದಾರೆ.
'ಚಾಲಕರು ಮತ್ತು ನಿರ್ವಾಹಕರ ಮನವೊಲಿಸಿ ಕೆಲಸ ನಿರ್ವಹಿಸಲು ಕರೆಯುತ್ತಿದ್ದೇವೆ. ಕೆಲವರು ಬರುವುದಕ್ಕೆ ಒಪ್ಪಿಕೊಂಡಿದ್ದಾರೆ. ಇವತ್ತು ಸಂಜೆ ವೇಳೆಗೆ ಕೆಲವರು ಬರಬಹುದಾಗಿದ್ದು, ಪ್ರಮುಖ ಮಾರ್ಗಗಳಲ್ಲಿ ಬಸ್ ಆರಂಭಿಸುತ್ತೇವೆ' ಎಂದು ಎನ್ ಇಕೆಆರ್ ಟಿಸಿ ರಾಯಚೂರು ವಿಭಾಗೀಯ ನಿಯಂತ್ರಕ ವೆಂಕಟೇಶ ತಿಳಿಸಿದರು.
ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದ ಸರ್ಕಾರಿ ಬಸ್ ಗಳು ಬರುತ್ತಿದ್ದು, ಕರ್ನೂಲ್, ಮಂತ್ರಾಲಯ, ಗದ್ವಾಲ್, ಮೆಹಬೂಬನಗರ್ ಕಡೆಗೆ ಬೆರಳೆಣಿಕೆಯಷ್ಟು ಪ್ರಯಾಣಿಕರು ಸಂಚರಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.