ADVERTISEMENT

ಲಿಂಗಸುಗೂರು: ಕಾಲು ತೊಳೆದುಕೊಳ್ಳಲು ಹೋಗಿ ಕಾಲುವೆ ಪಾಲಾದ ಇಬ್ಬರು ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 7:19 IST
Last Updated 2 ಜನವರಿ 2026, 7:19 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಲಿಂಗಸುಗೂರು: ತಾಲ್ಲೂಕಿನ ಆನಾಹೊಸೂರು ಗ್ರಾಮದ ಬಳಿಯ ಬಲದಂಡೆ ಕಾಲುವೆಯಲ್ಲಿ ಬುಧವಾರ ಕಾಲು ತೊಳೆದುಕೊಳ್ಳಲು ಹೋಗಿದ್ದ ಇಬ್ಬರು ಮಹಿಳೆಯರು ಜಾರಿ ಬಿದ್ದು ಮೃತಪಟ್ಟಿದ್ದಾರೆ. 

ಮಸ್ಕಿ ತಾಲ್ಲೂಕಿನ ನಂಜಲದಿನ್ನಿ ಗ್ರಾಮದ ದೇವಮ್ಮ ದುರುಗಪ್ಪ ಪೂಜಾರಿ(30),  ಈರಮ್ಮ ವೆಂಕಟೇಶ(40) ಮೃತಪಟ್ಟವರು.

ADVERTISEMENT

ತಾಲ್ಲೂಕಿನ ಆನಾಹೊಸೂರು ಗ್ರಾಮದಲ್ಲಿ ಭತ್ತ ನಾಟಿ ಕೂಲಿ ಮುಗಿಸಿಕೊಂಡು ವಾಪಸ್‌ ತಮ್ಮ ಊರಿಗೆ ಹೋಗುವಾಗ ಮಾರ್ಗಮಧ್ಯೆದಲ್ಲಿ ಕೈ-ಕಾಲು ತೊಳೆಯಲು ದೇವಮ್ಮ ಕಾಲುವೆಗೆ ಇಳಿಯುವಾಗ ಜಾರಿ ಬಿದ್ದಿದ್ದಾರೆ. ಆಕೆಯನ್ನು ಹಿಡಿದುಕೊಳ್ಳಲು ಹೋದಾಗ ಈರಮ್ಮನೂ ಜಾರಿ ಕಾಲುವೆಗೆ ಬಿದ್ದಾರೆ. 

ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.