ADVERTISEMENT

ಶಕ್ತಿನಗರ: ನಾಗಪಂಚಮಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 14:50 IST
Last Updated 13 ಆಗಸ್ಟ್ 2021, 14:50 IST
ಶಕ್ತಿನಗರದಲ್ಲಿ ನಾಗರಪಂಚಮಿ ನಿಮಿತ್ತ ಶುಕ್ರವಾರ ಮಹಿಳೆಯರು, ಮಕ್ಕಳು, ನಾಗಮೂರ್ತಿಗೆ ಹಾಲು ಎರೆದು ನೈವೇದ್ಯ ಸಲ್ಲಿಸಿದರು
ಶಕ್ತಿನಗರದಲ್ಲಿ ನಾಗರಪಂಚಮಿ ನಿಮಿತ್ತ ಶುಕ್ರವಾರ ಮಹಿಳೆಯರು, ಮಕ್ಕಳು, ನಾಗಮೂರ್ತಿಗೆ ಹಾಲು ಎರೆದು ನೈವೇದ್ಯ ಸಲ್ಲಿಸಿದರು   

ಶಕ್ತಿನಗರ: ದೇವಸೂಗೂರು ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಶುಕ್ರವಾರ ಮಹಿಳೆಯರು ನಾಗರ ದೇವರ ಮೂರ್ತಿಗೆ ಭಕ್ತಿಯಿಂದ ಹಾಲೆರೆದು ನಾಗರ ಪಂಚಮಿ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಿದರು.

ಶಕ್ತಿನಗರ, ದೇವಸೂಗೂರು, ಯದ್ಲಾಪುರ, ಸಗಮಕುಂಟ, ಕಾಡ್ಲೂರು, ಜೇಗರಕಲ್, ಯರಗುಂಟ, ಇಬ್ರಾಹಿಂದೊಡ್ಡಿ, ಕೊರ್ತಕುಂದ, ಅರಷಣಿಗಿ, ಗುರ್ಜಾಪುರ, ಕರೇಕಲ್, ಗಂಜಳ್ಳಿ ಗ್ರಾಮಗಳು ಸೇರಿದಂತೆ ದೇವಸೂಗೂರು ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿರುವ ನಾಗಮೂರ್ತಿಗೆ ಜನರು ಪೂಜೆ ಸಲ್ಲಿಸಿದರು.

ನಾಗ ಪಂಚಮಿ ನಿಮಿತ್ತ ಮನೆಯಲ್ಲಿ ಶೇಂಗಾ, ಪುಟಾಣಿ, ರವೆಯ ಉಂಡಿಗಳ ಜೊತೆಗೆ ಕಡಲೆ ಕಾಳು, ಜೋಳ ತಯಾರಿಸಿದ ಅರಳುಗಳ ನೈವೇದ್ಯ ಹಾಗೂ ಹತ್ತಿಯಿಂದ ತಯಾರಿಸಿದ ಬತ್ತಿ, ಕೊಬ್ಬರಿ ಬಟ್ಟಲಿನಲ್ಲಿ ಬೆಲ್ಲ ಮಿಶ್ರಣ ಮಾಡಿ ನಾಗದೇವರಿಗೆ, ಕುಟುಂಬದವರಿಗೆ, ಒಳ್ಳೆಯದು ಆಗಲಿ ಎಂದು ಅವ್ವನ ಪಾಲು, ಅಪ್ಪನ ಪಾಲು, ಅಣ್ಣ, ತಮ್ಮ, ಅಕ್ಕ, ತಂಗಿ ಕೊನೆಗೆ ಸರ್ವರ ಪಾಲು ಎಂದು ಹೇಳಿ, ನಾಗಮುರ್ತಿಗಳಿಗೆ ಹಾಲು ಎರೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.