ADVERTISEMENT

ರಾಯಚೂರು: ರಾಷ್ಟ್ರೀಯ ವಕೀಲರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2023, 15:51 IST
Last Updated 10 ಡಿಸೆಂಬರ್ 2023, 15:51 IST
ರಾಯಚೂರಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ವಿಶ್ವ ಮಾನವ ಹಕ್ಕುಗಳ ದಿನ ಹಾಗೂ ರಾಷ್ಟ್ರೀಯ ವಕೀಲರ ದಿನ ಆಚರಿಸಲಾಯಿತು
ರಾಯಚೂರಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ವಿಶ್ವ ಮಾನವ ಹಕ್ಕುಗಳ ದಿನ ಹಾಗೂ ರಾಷ್ಟ್ರೀಯ ವಕೀಲರ ದಿನ ಆಚರಿಸಲಾಯಿತು   

ರಾಯಚೂರು: ಇಲ್ಲಿನ ಉದಯನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ವಿಶ್ವ ಮಾನವ ಹಕ್ಕುಗಳ ದಿನ ಹಾಗೂ ರಾಷ್ಟ್ರೀಯ ವಕೀಲರ ದಿನ ಆಚರಿಸಲಾಯಿತು.

ಮಸ್ಕಿಯ ವಕೀಲ ನಾಗರಾಜ ಕಾರ್ಯಕ್ರಮ ಉದ್ಘಾಟಿಸಿದರು. ಸುಪ್ರಿಂ ಕೋರ್ಟ್‌ ವಕೀಲ ದೇವಣ್ಣ ನಾಯಕ, ವಕೀಲರಾದ ಶ್ರೀಕಾಂತರಾವ್ ಕೆ.ಎಂ.ಜೆ. ನೀಲಕಂಠರಾವ್, ಸಿ.ಬಿ.ಪಾಟೀಲ ಮಾತನಾಡಿದರು.

ರಾಯಚೂರು ಜಿಲ್ಲಾ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಬಿ.ಎನ್.ನಾಯಕ, ಕಾರ್ಯದರ್ಶಿ ಉದಯಕುಮಾರ ಮಾಲ್ಡಿ, ಮಲ್ಲಿಕಾರ್ಜುನ, ಅಶೋಕ ಕೊಂಡ, ಎಸ್.ಜೆ.ಮಠ ಭಾಗವಹಿಸಿದ್ದರು.

ADVERTISEMENT

ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಸ್ಮಿತಾ ಅಕ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಜಿತ ಕುಮಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.