ADVERTISEMENT

ರಾಯಚೂರು: ಜಾಲಹಳ್ಳಿ ಸಂಪೂರ್ಣ ಬಂದ್, ತಾಲ್ಲೂಕು ಘೋಷಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 7:01 IST
Last Updated 30 ಸೆಪ್ಟೆಂಬರ್ 2020, 7:01 IST
ಜಾಲಹಳ್ಳಿಯನ್ನು ನೂತನ ತಾಲ್ಲೂಕಾಗಿ ಘೋಷಿಸಬೇಕೇಂದು ಒತ್ತಾಯ
ಜಾಲಹಳ್ಳಿಯನ್ನು ನೂತನ ತಾಲ್ಲೂಕಾಗಿ ಘೋಷಿಸಬೇಕೇಂದು ಒತ್ತಾಯ   

ಜಾಲಹಳ್ಳಿ (ರಾಯಚೂರು): ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯನ್ನು ನೂತನ ತಾಲ್ಲೂಕಾಗಿ ಘೋಷಿಸಬೇಕೇಂದು ಒತ್ತಾಯಿಸಿ ಬುಧವಾರ ಬಂದ್ ಆಚರಿಸಲಾಗುತ್ತಿದೆ.

ಜಾಲಹಳ್ಳಿಯಲ್ಲಿ ಎಲ್ಲ ಅಂಗಡಿಗಳನ್ನು ವ್ಯಾಪಾರಿಗಳು ಬಂದ್ ಮಾಡಿಕೊಂಡಿದ್ದಾರೆ.

ಅರಕೇರಾ ಹೊಸ ತಾಲ್ಲೂಕು ಘೋಷಣೆ ಬಳಿಕ ಅಸಮಾಧಾನ ಭುಗಿಲೆದ್ದಿದೆ. ದೇವದುರ್ಗದಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಹೊಂದಿದ್ದರೂ ಜಾಲಹಳ್ಳಿ ಹೋಬಳಿ ಕೇಂದ್ರವನ್ನು ಪಟ್ಟಣ ಪಂಚಾಯಿತಿ ಮಾಡಿಲ್ಲ. ತಾಲ್ಲೂಕು ಕೇಂದ್ರವಾಗಲು ಎಲ್ಲ ರೀತಿಯ ಅರ್ಹತೆ ಇದೆ. ಕೂಡಲೇ ಹೊಸ ತಾಲ್ಲೂಕಾಗಿ ಘೋಷಿಸಬೇಕು ಎಂದು ಜಾಲಹಳ್ಳಿ ತಾಲ್ಲೂಕು ಹೋರಾಟ ಸಮಿತಿ ಒತ್ತಾಯಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.