ADVERTISEMENT

ಮೇವಿನ ಕೊರತೆ ನೀಗಿಸಲು ಪರ್ಯಾಯ ಮಾರ್ಗ: ನೇರ್‌ ಫೋನ್‌ ಇನ್‌ ಕಾರ್ಯಕ್ರಮ ಮೇ21ರಂದು

‘ಬರಗಾಲದ ಪರಿಸ್ಥಿತಿ’

​ಪ್ರಜಾವಾಣಿ ವಾರ್ತೆ
Published 20 ಮೇ 2019, 13:29 IST
Last Updated 20 ಮೇ 2019, 13:29 IST
ಆಲ್‌ ಇಂಡಿಯಾ ರೇಡಿಯೊ 
ಆಲ್‌ ಇಂಡಿಯಾ ರೇಡಿಯೊ    

ರಾಯಚೂರು: ಆಕಾಶವಾಣಿ ರಾಯಚೂರು ಕೇಂದ್ರವು ಮೇ 21 ರಂದು ಸಂಜೆ 6 ಗಂಟೆ 50 ನಿಮಿಷದಿಂದ 7 ಗಂಟೆ 35 ನಿಮಿಷದವರೆಗೆ ‘ಬರಗಾಲದ ಪರಿಸ್ಥಿತಿಯಲ್ಲಿ ಮೇವಿನ ಕೊರತೆ ನೀಗಿಸಲು ಪರ್ಯಾಯ ಮಾರ್ಗಗಳು’ ಕುರಿತು ನೇರ ಫೋನ್-ಇನ್ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ. ಈ ಕಾರ್ಯಕ್ರಮದಲ್ಲಿ ರಾಯಚೂರು ಕೃಷಿ ಸಂಶೋಧನಾ ಕೇಂದ್ರದ ಪ್ರಾಣಿ ತಜ್ಞ ಡಾ.ಶ್ರೀಧರ್ ಜೆ.ಎನ್ ಅವರು ಭಾಗವಹಿಸಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

ಕೇಳುಗರು ಹಾಗೂ ರೈತ ಬಾಂಧವರು ಆಕಾಶವಾಣಿ ದೂರವಾಣಿ ಸಂಖ್ಯೆ 223178 ಅಥವಾ 223365 ಸಂಖ್ಯೆಗಳಿಗೆ ಕರೆಮಾಡಿ ಮೇವಿನ ಕೊರತೆ ನೀಗಿಸಲು ಪರ್ಯಾಯ ಮಾರ್ಗಗಳು ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ರಾಯಚೂರು ತಾಲ್ಲೂಕಿನ ಹೊರಗಡೆಯಿಂದ ಕರೆಮಾಡುವವರು ಎಸ್.ಟಿ.ಡಿ. ಕೋಡ್ ಸಂಖ್ಯೆ 08532 ಬಳಸಿ ಕರೆ ಮಾಡಬೇಕು. ಜಿಲ್ಲೆಯ ಕೇಳುಗರು ಹಾಗೂ ರೈತ ಬಾಂಧವರು ಈ ಕಾರ್ಯಕ್ರಮದ ಪ್ರಯೋಜನೆ ಪಡೆಯುವಂತೆ ರಾಯಚೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಡಾ.ವ್ಹಿ.ಜಿ.ಬಾವಲತ್ತಿ ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.